ಧಾರವಾಡದಲ್ಲಿ ಸದ್ದು ಮಾಡಿದ ತಲ್ವಾರ್ – ಮನೆ ಕಟ್ಟುವ ವಿಚಾರಕ್ಕಾಗಿ ಚಿಕ್ಕಪ್ಪನ ಮೇಲೆ ತಲ್ವಾರ್ ಬೀಸಿದ ಮಗ…..

Suddi Sante Desk

ಧಾರವಾಡ –

ಮನೆ ಕಟ್ಟುವ ವಿಚಾರಕ್ಕಾಗಿ ಧಾರವಾಡದ ಸೈದಾಪೂರದಲ್ಲಿ ತಲ್ವಾರ್ ಸದ್ದು ಮಾಡಿದೆ. ಹೌದು ಸೈದಾಪೂರದ ದುಂಬಗಿರಿ ಬಡಾವಣೆಯಲ್ಲಿ ಸಂಬಂಧಿಕರ ನಡುವೆ ಹೊಡೆದಾಟ ನಡೆದಿದೆ. ವಸೀಂ ಶಿವಳ್ಳಿ ಎಂಬುವರು ಅವರ ಚಿಕ್ಕಪ್ಪನಾದ ಯಾಕೂಬ್ ಶಿವಳ್ಳಿ ಎಂಬುವರ ಮೇಲೆ ತಲ್ವಾರ್ ನಿಂದಾ ಅಟ್ಯಾಕ್ ಮಾಡಿದ್ದಾರೆ.

ಗಾಯಗೊಂಡ ಯಾಕೂಬ್

ಸಂಜೆ ಸಮಯದಲ್ಲಿ ಮನೆ ಕಟ್ಟುವ ವಿಚಾರಕ್ಕಾಗಿ ಮಾತಿಗೆ ಮಾತು ಬೆಳೆದು ಕೊನೆಗೆ ತಲ್ವಾರ್ ನಿಂದ ವಸಿಂ ಯಾಕೂಬ್ ಮೇಲೆ ಹಲ್ಲೆ ಮಾಡಿದ್ದಾರೆ.ತಲೆ ಮತ್ತು ಇತರೆ ಭಾಗಗಳಲ್ಲಿ ತೀವ್ರವಾದ ಗಾಯಗಳಾ ಗಿದ್ದು ತೀವ್ರವಾಗಿ ಗಾಯಗೊಂಡಿರುವ ಯಾಕೂಬ್ ನಗರದ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದು ಇತ್ತ ವಸಿಂ ಎಸ್ಕೇಫ್ ಆಗಿದ್ದಾನೆ

ಆರೋಪಿ ವಸೀಂ

ಇನ್ನೂ ವಿಷಯ ತಿಳಿದ ಧಾರವಾಡದ ಉಪನಗರ ಪೊಲೀಸರ ಸ್ಥಳಕ್ಕೇ ಭೇಟಿ ನೀಡಿ ಪರಿಶೀಲನೆ ಮಾಡಿ ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದು ಮುಂದಿನ ಕ್ರಮವನ್ನು ಕೈಗೊಂಡಿದ್ದು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.