ಕರೋನಾ ಕಡಿಮೆಯಾದರೆ SSLC ಪರೀಕ್ಷೆ ಇಲ್ಲವಾದರೆ ಮಾಡೊದಿಲ್ಲ – ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆ…..

Suddi Sante Desk

ಬೆಳಗಾವಿ –

ಕರೋನಾ ಮಹಾಮಾರಿಯ ನಡುವೆ ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಮಾಡಲಾಗು ತ್ತದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು. ಜುಲೈ ಮೂರನೇಯ ವಾರದಲ್ಲಿ ಈ ಒಂದು ಪರೀಕ್ಷೆಯನ್ನು ನಡೆಸಲು ತಿರ್ಮಾನವನ್ನು ಮಾಡಲಾಗಿದೆ ಎಂದಿದ್ದಾರೆ.ಈ ಒಂದು ವಿಚಾರ ಕುರಿತಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಾತನಾಡಿದರು.

ಪರೀಕ್ಷೆ ನಡೆಸುವ ಕುರಿತಂತೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಪರೀಕ್ಷಾ ಸಮಯದಲ್ಲಿ ಒಂದು ವೇಳೆ ಕರೋನಾ ಮಹಾಮಾರಿ ಹೆಚ್ಚಾಗಿದ್ದರೆ ಪರೀಕ್ಷೆಯನ್ನು ಮಾಡೊದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.ಬೆಳಗಾವಿಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು ಇಂದು ಬೆಂಗ ಳೂರಿನಲ್ಲಿ ಶಿಕ್ಷಣ ಸಚಿವರು ಇದರ ಬಗ್ಗೆ ಮಾತನಾ ಡಿದ್ದಾರೆ ಸಧ್ಯ ಪರಸ್ಥಿತಿ ರಾಜ್ಯದಲ್ಲಿ ಹತೋಟಿಗೆ ಬರು ತ್ತಿದ್ದು ಹೀಗಾಗಿ ಪರೀಕ್ಷೆಯನ್ನು ನಡೆಸಲು ತಿರ್ಮಾನಿ ಸಲಾಗಿದ್ದು ಹೀಗಾಗಿ ಆ ಒಂದು ಸಮಯದಲ್ಲಿ ಒಂದು ವೇಳೆ ಕರೋನಾಹೆಚ್ಚಾಗಿದ್ದು ಕಂಡು ಬಂದರೆ ಯಾವುದೇ ಕಾರಣಕ್ಕೂ ಪರೀಕ್ಷೆಯನ್ನು ಮಾಡೊದಿ ಲ್ಲ ಪರಿಶೀಲನೆ ಮಾಡಿ ರದ್ದು ಮಾಡುತ್ತೇವೆ ಎಂದು ಹೇಳಿದರು.

ಪರಿಸ್ಥಿತಿ ಸುಧಾರಣೆ ಆದರೇ ಪರೀಕ್ಷೆ ನಡೆಸುತ್ತೇವೆ‌. ಇಲ್ಲದೇ ಇದ್ರೆ ಪರೀಕ್ಷೆ ನಡೆಸಲ್ಲ ಎಂದು ಹೇಳಿ ಪರೀ ಕ್ಷೆಯ ಆತಂಕದಲ್ಲಿರುವ ವಿದ್ಯಾರ್ಥಿಗಳಿಗೆ ಬಿಎಸ್ ವೈ ಧೈರ್ಯದ ಮಾತು ತುಂಬಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.