RSS, BJP ಮುಖಂಡ ಎಂದು ಹೇಳಿಕೊಂಡು ಧಾರವಾಡದಲ್ಲಿ ಅಪಾರ್ಟ್ ಮೆಂಟ್ ಗೆ ನುಗ್ಗಿ ಗಲಾಟೆ – ದಾಖಲಾಯಿತು ದೂರು

Suddi Sante Desk

ಧಾರವಾಡ –

ನಾನೊಬ್ಬ ಬಿಜೆಪಿ, ಆರ್ ಎಸ್ ಎಸ್ ಕಾರ್ಯಕರ್ತ ಎಂದು ಹೇಳಿಕೊಂಡು ಅಪಾರ್ಟ್ ಮೆಂಟ್ ಗೆ ನುಗ್ಗಿ ದಾಂಧಲೆ ನಡೆಸಿದ ಘಟನೆ ಧಾರವಾಡದಲ್ಲಿ ನಡೆದಿದೆ.ನಗರದ ನಾರಾಯಣಪುರದಲ್ಲಿರುವ ಅಪಾರ್ಟ್‌ಮೆಂಟ್ ನಲ್ಲಿ ಈ ಒಂದು ಘಟನೆ ನಡೆದಿದೆ.

ಕಳೆದ ಎರಡು ದಿನಗಳ ಹಿಂದೆಯಷ್ಟೇ ಈ ಒಂದು ಘಟನೆ ನಡೆದಿದ್ದು 10 ರಿಂದ 15 ಜನರಿರುವ ಗುಂಪೊಂದು ಅಪಾರ್ಟ್ ಮೆಂಟ್ ಗೆ ನುಗ್ಗಿದೆ. ಇಲ್ಲಿನ ಮನೆಯೊಂದರ ಬಾಗಿಲಿಗೆ ಬಡಿದು ಕಿಡಕಿ ಒದ್ದು ಜೋರಾಗಿ ಬೈದಿದ್ದಾರೆ ಅಲ್ಲದೇ ಮನೆಯಲ್ಲಿದ್ದ ವರಿಗೆ ಅವಾಚ್ಯವಾಗಿ ಬೈದು ಜೀವ ಬೆದರಿಕೆಯನ್ನು ಹಾಕಲಾಗಿದೆಯಂತೆ.

ಈ ಕುರಿತಂತೆ ಶೋಭಾ ಬ್ಯಾಹಟ್ಟಿ ಎಂಬುವರ ಮನೆಗೆ ಮೊದಲು ಬಂದ ಟೀಮ್ ಅವರು ಎಲ್ಲಿ ಅವರು ಎಂದು ಕೇಳಿದ್ದಾರೆ.ಜೋರಾಗಿ ಬಾಗಿಲು ಬಡಿದು ಕಿಡಕಿ ಬಡೆದು ಒದ್ದಿದ್ದಾರೆ.ಈ ಒಂದು ವಿಚಾರ ವನ್ನು ದೂರಿನಲ್ಲಿ ಉಲ್ಲೇಖ ಮಾಡಿ ದೂರನ್ನು ನೀಡಿದ್ದಾರೆ

ಸಧ್ಯ ಈ ಒಂದು ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲು ಮಾಡಲಾಗಿದೆ ಮಂಜು ಮಕ್ಕಳಗೇರಿ ಮತ್ತು ಇತರರ ಮೇಲೆ ದೂರನ್ನು ದಾಖಲು ಮಾಡಿದ್ದು ಸಧ್ಯ ದೂರನ್ನು ದಾಖಲು ಮಾಡಿಕೊಂಡಿರುವ ಉಪನಗರ ಪೊಲೀ ಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

ಒಟ್ಟಾರೆ ಹತ್ತರಿಂದ ಹದಿನೈದು ಜನರನ್ನು ಮಂಜು ಮಕ್ಕಳಗೇರಿ ಎಂಬುವರು ಹೀಗೆ ಅಪಾರ್ಟ್‌ಮೆಂಟ್ ಮನೆಗೆ ಕರೆದುಕೊಂಡು ಹೋಗಿ ಹೀಗೆ ಮಾಡಿದ್ದು ಸರಿನಾ ಅದರಲ್ಲೂ ಒಂದು ಪಕ್ಷದ ಸಂಘದ ಹೆಸರು ಹೇಳಿ ಹೀಗೆ ಮಾಡಿದರು ಯಾಕೇ ಸುಮ್ಮನೆ ಇದ್ದಾರೆ ಇದಕ್ಕೆ ಸಂಬಂಧಿಸಿದವರು ಉತ್ತರಿಸಬೇಕು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.