ಅನ್ಯ ಕಾರ್ಯಗಳಿಗೆ ನಿಯೋಜನೆ ಮಾಡಿದ ಶಿಕ್ಷಕರನ್ನು ಕೂಡಲೇ ರದ್ದು ಮಾಡಿ -ಮತ್ತೊಂದು ಆದೇಶ ಹೊರಬಿತ್ತು ಇಲಾಖೆಯಿಂದ ಮತ್ತೊಂದು ಆದೇಶ…..

Suddi Sante Desk

ಬೆಂಗಳೂರು –

ಶಾಲೆಯಲ್ಲಿ ಪಾಠ ಮಾಡದೇ ಬೇರೆ ಬೇರೆ ಕಡೆಗೆ ನಿಯೋಜನೆಗೊಂಡಿರುವ ಶಿಕ್ಷಕರನ್ನು ಈ ಕೂಡಲೇ ಬಿಡುಗಡೆ ಮಾಡಲು ಶಿಕ್ಷಣ ಇಲಾಖೆಯ ಆಯುಕ್ತರು ಆದೇಶವನ್ನು ಮಾಡಿದ್ದಾರೆ‌.

ರಾಜ್ಯದ ಶಿಕ್ಷಣ ಇಲಾಖೆಯಲ್ಲಿ ಬೋಧನಾ ಕಾರ್ಯಕ್ಕೆ ಬಿಟ್ಟು ಉಳಿದ ಬೇರೆ ಇಲಾಖೆಗಳಿಗೆ ನಿಯೋಜನೆ ಮಾಡಿದ ಶಿಕ್ಷಕರನ್ನು ಈ ಕೂಡಲೇ ರದ್ದು ಮಾಡಿ ಮಾತೃ ಇಲಾಖೆಗೆ ನಿಯೋಜನೆ ಮಾಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಯ ಆಯುಕ್ತರು ಆದೇಶವನ್ನು ಮಾಡಿದ್ದಾರೆ.

ಹೌದು ಈ ಹಿಂದೆ ಕೂಡಾ ಈ ಒಂದು ವಿಚಾರ ಕುರಿತು ಆದೇಶವನ್ನು ಮಾಡಿದ್ದರು ಆದರೂ ಕೂಡಾ ಆದೇಶವನ್ನು ಸಮರ್ಪಕವಾಗಿ ಜಾರಿಯಾಗದೇ ಅಲ್ಪ ಸ್ವಲ್ಪ ಪ್ರಮಾಣ ದಲ್ಲಿ ಮಾತ್ರ ಶಿಕ್ಷಕರನ್ನು ಬಿಡುಗಡೆ ಮಾಡಲಾಗಿತ್ತು ಈಗ ಮತ್ತೆ ನ್ಯಾಯಾಲಯದ ಸೂಚನೆ ಹಿನ್ನಲೆಯಲ್ಲಿ ಶಿಕ್ಷಣ ಇಲಾಖೆಯ ಆಯುಕ್ತರು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ ಗಳಿಗೆ ಮತ್ತು ಇಲಾಖೆಯ ಅಧಿಕಾರಿಗಳಿಗೆ ಸಂದೇಶವನ್ನು ನೀಡಿದ್ದಾರೆ.ಏಳು ದಿನಗಳ ಒಳಗಾಗಿ ಬಿಡುಗಡೆ ಮಾಡಿ ಕೂಡಲೇ ವರದಿ ಮಾಡಿ ಮಾಹಿತಿ ನೀಡುವಂತೆ ಸೂಚನೆ ನೀಡಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.