This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

State News

IAS ಪಾಸ್ ಮಾಡಿಸುವಂತೆ KAS ಅಧಿಕಾರಿ ಪತ್ರ ಹುಂಡಿಯಲ್ಲಿ ಪತ್ತೆ ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಬರೆದರು ಸರ್ಕಾರಿ ಅಧಿಕಾರಿ…..

WhatsApp Group Join Now
Telegram Group Join Now

ಹೊನ್ನಾಳಿ

IAS ಪಾಸಾಗುವಂತೆ ಅನುಗ್ರಹಿಸು ತಾಯೆ ಎಂದು ದೇವಿ ಯಲ್ಲಿ ಪ್ರಾರ್ಥನೆ ಸಲ್ಲಿಸಿ KAS ಅಧಿಕಾರಿಯೊಬ್ಬರು ಬರೆದ ಪತ್ರವೊಂದು ಹುಂಡಿಯಲ್ಲಿ ದೊರೆತಿದೆ.ಹೌದು ಹೊನ್ನಾಳಿ ತಾಲೂಕಿನ ಎ ಗ್ರೇಡ್ ದೇವಾಲಯಗಳಲ್ಲಿ ಒಂದಾದ ಮಾರಿ ಕೊಪ್ಪ ಗ್ರಾಮದ ಹಳದಮ್ಮ ದೇವಾಲಯದಲ್ಲಿ ಹುಂಡಿ ಹಣ ಎಣಿಕೆ ವೇಳೆ ವಿವಿಧ ರೀತಿಯ ಪತ್ರಗಳು ದೊರೆತಿವೆ.

ನನಗೆ ಮೋಸ ಮಾಡಿದವರಿಗೆ ತಕ್ಕ ಶಾಸ್ತಿ ಆಗಬೇಕು ಅವರ ಕನಸು ಮನಸ್ಸಿನಲ್ಲೂ ನೀನು ಕಾಣಿಸಿಕೊಳ್ಳಬೇಡ ಅವರು ಪರಸ್ಪರ ಜಗಳ ಮಾಡಿಕೊಂಡು ಅವರ ಮನೆ ನಾಶವಾಗಬೇಕು.ಅವರೆಂದಿಗೂ ತಲೆ ಎತ್ತದಂತೆ ಮಾಡು ತಾಯಿ ಎಂದು ವಿನಂತಿಸಿಕೊಂಡು ಮತ್ತೊಬ್ಬ ಭಕ್ತ ವಿಚಿತ್ರ ವಾಗಿ ಪತ್ರ ಬರೆದಿದ್ದಾರೆ.ಜೊತೆಗೆ ಹಿರೇಕೆರೂರಿನ ಮಡ್ಲಿ ದುರ್ಗಮ್ಮ,ಯಲ್ಲಮ್ಮ,ಉಕ್ಕಡಗಾತ್ರಿ ಕರಿಬಸವೇಶ್ವರ ಧರ್ಮಸ್ಥಳ ಮಂಜುನಾಥ ಸ್ವಾಮಿ,ಶಿರಿಡಿ ಸಾಯಿಬಾಬಾ, ತಾಯಿ ರಾಜರಾಜೇಶ್ವರಿ ಸೇರಿ ಅನೇಕ ದೇವರಆಶೀರ್ವಾದ ಬೇಡಿರುವ ಪತ್ರಗಳು ಸಿಕ್ಕಿವೆ.

ಇದರೊಂದಿಗೆ ಕೆಎಸಹುಂಡಿ ಎಣಿಕೆ ವೇಳೆ ದೇವಸ್ಥಾನ ಸಮಿತಿ ಅಧ್ಯಕ್ಷ ಹನುಮಂತಪ್ಪ, ಮಾಜಿ ಅಧ್ಯಕ್ಷ ಚಿನ್ನಪ್ಪ, ಹಳದಪ್ಪ, ರೂಪಾ ಚನ್ನೇಶ್, ಎ.ಕೆ.ಹಳದಪ್ಪ, ತಿಮ್ಮಪ್ಪ, ಪ್ರಭುಗೌಡ, ಪ್ರಧಾನ ಅರ್ಚಕ ಮಲ್ಲಿಕಾರ್ಜುನ್, ರಾಜಸ್ವ ನಿರೀಕ್ಷಕ ಮುನ್ನೇಶ್, ದಿನೇಶ್, ನೇತ್ರಾವತಿ, ಕೆನರಾ ಬ್ಯಾಂಕ್ ಅಧಿಕಾರಿ ರಾಮಣ್ಣ ಇತರರಿದ್ದರು.


Google News

 

 

WhatsApp Group Join Now
Telegram Group Join Now
Suddi Sante Desk