ಹಾಸನ –
ಇಂಜಿನಿಯರ್ ಕೈಯಿಂದ ಫೈಲ್ ಕಿತ್ತುಕೊಂಡು ಕಂಟ್ರಾಕ್ಟರ್ ರೊಬ್ಬರು ಓಡಿದ ಘಟನೆ ಹಾಸನದಲ್ಲಿ ನಡೆದಿದೆ. ಕೊಳವೆ ಬಾವಿ ಗುತ್ತಿಗೆ ಕೊರೆಯುವ ಹಣ ಸಂದಾಯ ವಿಚಾರದಲ್ಲಿ ಗೊಂದಲ ಉಂಟಾಗಿ ಈ ಒಂದು ಘಟನೆ ನಡೆದಿದೆ.
ಎಸ್.ಸಿ.ಪಿ.ಟಿ.ಎಸ್.ಪಿ.ಯೋಜನೆಯಡಿ ಜಾರಿಯಾಗಿದ್ದ ಕೊಳವೆ ಬಾವಿಗಳು.ಕೊಳವೆ ಬಾವಿ ಕೊರೆಯಲು ಮತ್ತು ಎಲೆಕ್ಟ್ರಿಕ್ ಕೆಲಸದ ಗುತ್ತಿಗೆ ಪಡೆದಿದ್ದ ಕೇಶವ್ ಶಾಮಣ್ಣ ಮತ್ತು ಗಂಗಾಧರ್ ಆಚಾರಿ.ಗುತ್ತಿಗೆಯನ್ನು ಪ್ರೀತಂ ಎಂಬು ವವರಿಗೆ ಉಪ ಗುತ್ತಿಗೆ ನೀಡಿದ್ದ ಮೂಲ ಗುತ್ತಿಗೆದಾರರಾದ ಶಾಮಣ್ಣ ಮತ್ತು ಗಂಗಾಧರ್.ಮೂಲ ಗುತ್ತಿಗೆದಾರರು ಮತ್ತು ಉಪ ಗುತ್ತಿಗೆದಾರರ ನಡುವೆ ಕಿತ್ತಾಟ ದಿಂದಾಗಿ ಈ ಒಂದು ಗಲಾಟೆ ನಡೆದಿದೆ
ನನಗೆ ಎಲೆಕ್ಟ್ರಿಕ್ ಕೆಲಸ ಮಾಡಿದ್ದ ಹಣ ಸಂದಾಯ ಮಾಡಿಲ್ಲ ಎಂದು ಪ್ರೀತಂ ಆರೋಪವನ್ನು ಮಾಡಿದ್ದಾರೆ. ನನಗೆ ಹಣ ಸಂದಾಯವಾಗದೆ ಇದ್ದರೆ ಬಿಲ್ ಮಾಡಲು ಬಿಡುವುದಿಲ್ಲ ಎಂದು ತಕರಾರು ತೆಗೆದಿದ್ದ ಪ್ರೀತಂ ಬಿಲ್ ಪಾವತಿ ಮಾಡಿಸಲು ಮೇಲಾಧಿಕಾರಿ ಸಹಿಗೆ ಫೈಲ್ ತೆಗೆದು ಕೊಂಡು ಹೋಗಿದ್ದ ಇಂಜಿನಿಯರ್ ನವೀನ್ಇಂಜಿನಿಯರ್ ನವೀನ್ ಕೈ ಯಿಂದ ಫೈಲ್ ಕಿತ್ತುಕೊಂಡು ಓಡಿದ ಪ್ರೀತಂ
ಆಲೂರು ಪಟ್ಟಣದಲ್ಲಿರುವ ಕಾವೇರಿ ನೀರಾವರಿ ನಿಗಮದ ಹೇಮಾವತಿ ಪುನರ್ ವಸತಿ ವಿಭಾಗದ ಕಚೇರಿಯಲ್ಲಿ ಈ ಒಂದು ಘಟನೆ ನಡೆದಿದೆ.ಪ್ರೀತಂ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಇಂಜಿನಿಯರ್ ನವೀನ್ ಅಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು