ಬೆಂಗಳೂರು –
ವರ್ಗಾವಣೆ ವಂಚಿತ ಶಿಕ್ಷಕರು ಕೊನೆಗೂ ಮುಂದಿನ ಹೋರಾಟ ರೂಪುರೇಷೆ ಕುರಿತು ಚರ್ಚೆ ಮಾಡಿ ಅಂತಿಮ ವಾದ ನಿರ್ಧಾರ ನಿರ್ಣಯಗಳನ್ನು ತೆಗೆದುಕೊಳ್ಳುವ ಉದ್ದೇಶದಿಂದ ವರ್ಗಾವಣೆ ವಂಚಿತರಾದ ಶಿಕ್ಷಕರೆಲ್ಲರೂ ನಾಳೆ ಸಭೆಯನ್ನು ಕರೆದಿದ್ದಾರೆ.ರಾಯಚೂರು ಮತ್ತು ಯಾದಗಿರಿ ಜಿಲ್ಲೆಯಲ್ಲಿ ಏಕಕಾಲದಲ್ಲಿ ಈ ಒಂದು ಸಭೆಗಳು ನಡೆಯಲಿದ್ದು ವರ್ಗಾವಣೆ ವಂಚಿತರಾದ ಶಿಕ್ಷಕರೆಲ್ಲರೂ ಪಾಲ್ಗೊಳ್ಳುವಂತೆ ಕರೆ ನೀಡಲಾಗಿದೆ
ಈಗಾಗಲೇ ಈ ಒಂದು ವಿಚಾರ ಕುರಿತು ಅಂತಿಮವಾಗಿ ಚರ್ಚೆ ಮಾಡಿ ಮುಂದಿನ ಹೋರಾಟದ ನಿರ್ಧಾರವನ್ನು ಕೈಗೊಳ್ಳಲು ಈ ಒಂದು ಸಭೆ ಮಹತ್ವದ್ದಾಗಿದ್ದು ಹೆಚ್ಚಿನ ಪ್ರಮಾಣದಲ್ಲಿ ಶಿಕ್ಷಕರು ಪಾಲ್ಗೊಳ್ಳಲು ವೇದಿಕೆಯವರು ವಿನಂತಿಸಿಕೊಂಡಿದ್ದಾರೆ.