ಬೆಂಗಳೂರು –
ಕೋವಿಡ್ ಮಹಾಮಾರಿಯ ನಡುವೆ ರಾಜ್ಯದಲ್ಲಿ ಎರಡು ಹಂತದಲ್ಲಿ ಶಾಲೆಗಳು ಆರಂಭವಾಗಿದ್ದು ಕಾರ್ಯಾರಂಭಗೊಂಡಿರುವ ಶಾಲೆಗಳಲ್ಲಿನ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಸುರಕ್ಷತಾ ದೃಷ್ಟಿಯಿಂದ ಸಪ್ಟಂಬರ್ 28 ಮತ್ತು 29 ರಂದು ಎರಡು ದಿನಗಳ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುವಂತೆ ಸಾರ್ವಜನಿಕರ ಶಿಕ್ಷಣ ಇಲಾಖೆಯ ಆಯುಕ್ತರು ಸೂಚನೆಯನ್ನು ನೀಡಿ ದ್ದಾರೆ.
ಈ ಕುರಿತಂತೆ ನೊಡೇಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು ತಮಗೆ ವಹಿಸಿದ ಕರ್ತವ್ಯವನ್ನು ಮಾಡುವಂತೆ ಆದೇಶವನ್ನು ಮಾಡಿದ್ದಾರೆ. ಹಾಗೇ ನಾಲ್ಕು ಅಂಶಗಳ ಕುರಿತಂತೆ ಮೌಲ್ಯಮಾಪನವನ್ನು ಮಾಡಬೇಕು ನಂತರ ಸಮಗ್ರವಾದ ಮಾಹಿತಿಯನ್ನು ಅಕ್ಟೋಬರ್ 1 ರಂದು ಕಳಿಸುವಂತೆ ಹೇಳಿದ್ದಾರೆ.
ಈ ಒಂದು ಮಾಹಿತಿಯನ್ನು ತಪ್ಪದೇ ಕಡ್ಡಾಯವಾಗಿ ಮಾಡಬೇಕು ಸೂಚನೆ ಪಾಲಿಸುವಂತೆ ರಾಜ್ಯದ ಎಲ್ಲಾ ಡಿಡಿಪಿಐ ಗಳಿಗೆ ಆಯುಕ್ತರು ಖಡಕ್ ಸೂಚನೆಯನ್ನು ನೀಡಿದ್ದಾರೆ.