ಬೆಂಗಳೂರು –
ತುಮಕೂರಿನಲ್ಲಿ ನಡೆದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯಕಾರಿಣಿ ಸಭೆಯಲ್ಲಿ ಸಂಘದ ಪದಾಧಿಕಾರಿಗಳ ಮೇಲೆ ದಾಳಿ
ಚಿಕ್ಕವಯಸ್ಸಿನಲ್ಲಿಯೇ ರಾಜ್ಯ ಸಂಘದ ಪದಾಧಿಕಾರಿ ಹುದ್ದೆಯನ್ನು ಅಲಂಕರಿಸಿ ಹಿರಿಯ ಪದಾಧಿಕಾರಿಗಳಿಗೆ ಸಂಘಟನೆಯ ಬಗ್ಗೆ ಸಂಘದ ಆರ್ಥಿಕ ಶಿಸ್ತಿನ ಬಗ್ಗೆ ಸಂಘಟನೆಗಳ ಸೌಹಾರ್ದತೆ ಬಗ್ಗೆ ಪ್ರಭುದ್ಧತೆ ಮಾತುಗಳನ್ನು ಆಡಿದ ನಾಗನಗೌಡರು ಎಲ್ಲರಿಗೂ ಮಾದರಿಯಾಗಿತ್ತು
ಸಭೆ ಆರಂಭವಾಗುತ್ತಿದ್ದಂತೆ ನಾಗನಗೌಡ ಡೌನ್ ಡೌನ್ ಎಂದು ಹಾವೇರಿ ಯ ಕಾರ್ಯದರ್ಶಿ ರವಿ ಗೋಣೆಪ್ಪನವರ ಚಿತ್ರದುರ್ಗ ಜಿಲ್ಲಾಧ್ಯಕ್ಷ ರಾದ ಮಾರುತೇಶ ರವರು ಧರಣಿ ಕುಳಿತ ಹಿಂದಿರುವ ನಡೆ ಏನು ???
ಕೆಲವು ಪೂರ್ವನಿಯೋಜಿತ ಉದ್ದೇಶ ದೊಂದಿಗೆ ರಾಜ್ಯ ಎನ್ ಪಿ ಎಸ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆಯನ್ನು ನೀಡುವಂತೆ ಒತ್ತಾಯಿಸಿ ನೆಪ ಮಾಡಿಕೊಂಡು 20 ರಿಂದ 25 ಜನರ ಸದಸ್ಯರು ನಾಗನಗೌಡರ ಮೇಲೆ ದಾಳಿಯನ್ನು ಮಾಡುವ ಹಂತಕ್ಕೆ ಹೋಗಿದ್ದು ದುರದೃಷ್ಟಕರ. ರಾಜ್ಯ ಸಂಘದ ಅಪ್ರಬುದ್ಧ ತೆಯ ನಡೆಗಳು ನೌಕರರ ಶಿಕ್ಷಕರ ಹಿತಾಸಕ್ತಿಗಾಗಿ ನಿರ್ಣಯ ತೆಗೆದುಕೊಳ್ಳುವಲ್ಲಿಯ ವಿಫಲತೆ ಸಂಘದ ಹಿತಾಸಕ್ತಿಗೆ ಧಕ್ಕೆ ಉಂಟಾಗಿದೆ.
ಸಂಘಟನಾ ಕಾರ್ಯದರ್ಶಿ ನಾಗನಗೌಡ ಮಾತಾಡಿ ರಾಜ್ಯದ NPS ನೌಕರರ ಸಂಘ ಎಲ್ಲಾ ಇಲಾಖೆಯ ನೌಕರರನ್ನು ಒಳಗೊಂಡ ಸಂಘ . NPS ರದ್ದತಿಗಾಗಿ ಐತಿಹಾಸಿಕವಾಗಿ ಹೋರಾಟಗಳನ್ನು ಮಾಡಿದೆ. NPS ರದ್ದತಿಗಾಗಿ, ವರ್ಗಾವಣೆ, C & R ತಿದ್ದುಪಡಿಗಾಗಿ ಹೋರಾಟ ಅಗತ್ಯವಿದೆ. ಪ್ರತಿ ಜಿಲ್ಲಾ ತಾಲ್ಲೂಕು ಅಧ್ಯಕ್ಷರುಗಳು ತಮ್ಮ ಹಂತದಲ್ಲಿ ಪದವೀಧರ, ಗ್ರಾಮೀಣ, ಸಾವಿತ್ರಿ ಭಾಯಿ ಪುಲೆ, nps ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ಇರುವ 3000 ಕ್ಕೂ ಹೆಚ್ಚು ಸದಸ್ಯರು ಗಳನ್ನು ರಾಜೀನಾಮೆ ಪಡೆಯಲು ಆಗುತ್ತದೆಯೇ? ನಾನು ಈಗಲೇ ಖಾಲಿ ಹಾಳೆಯ ಮೇಲೆ ಸಹಿ ಮಾಡಿ ಅಧ್ಯಕ್ಷರಿಗೆ ಕೊಡುತ್ತೇನೆ ಎಂದರು.
ಸಂಘ ಯಾವಾಗಲೂ ರಚನಾತ್ಮಕವಾಗಿ ಸಂಘದ ಸದಸ್ಯರ ಹಿತಾಸಕ್ತಿಗಾಗಿ ಪಾರದರ್ಶಕತೆ ಯಿಂದ ಕೆಲಸ ಮಾಡಬೇಕು ಎಂದರು.ಈ ಒಂದು ಲೇಖನವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಬಂದಿದ್ದು ಯಥಾವತ್ತಾಗಿ ಪ್ರಕಟಿಸಲಾಗಿದೆ