ಬೆಂಗಳೂರು –
ಈಗಾಗಲೇ ಬಹುತೇಕ ಎಲ್ಲಾ ಸರ್ಕಾರಿ ಕಚೇರಿ ಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಯನ್ನು ಜಾರಿಗೆ ತರಲಾಗಿದೆ ಈವರೆಗೆ ಇದರಿಂದ ದೂರವಿದ್ದ ಸರ್ಕಾರಿ ಶಾಲಾ ಶಿಕ್ಷಕರಿಗೂ ಈ ಒಂದು ವ್ಯವಸ್ಥೆ ಯನ್ನು ಜಾರಿಗೆ ತರಲು ರಾಜ್ಯದ ಶಿಕ್ಷಣ ಇಲಾಖೆ ಮುಂದಾಗಿದೆ
ಹೌದು ಈಗಾಗಲೇ ಈ ಒಂದು ಕುರಿತು ಸಚಿವರು ಪ್ಲಾನ್ ಮಾಡಿದ್ದು ಶಾಲೆಗಳಿಗೆ ಶಿಕ್ಷಕರು ಅನಧಿಕೃತವಾಗಿ ಗೈರು ಹಾಜರಾಗುತ್ತಿರುವ ಕುರಿತು ದೂರುಗಳು ಕೇಳಿ ಬರುತ್ತಿ ರುವ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಮಹತ್ವದ ತೀರ್ಮಾ ನವೊಂದನ್ನು ಕೈಗೊಳ್ಳಲು ಮುಂದಾಗಿದೆ. ಹಾಜರಾತಿ ಯನ್ನು ಬಯೋಮೆಟ್ರಿಕ್ ಮಾಡಲು ಚಿಂತನೆ ನಡೆಸಲಾ ಗಿದ್ದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಈ ವಿಷಯವನ್ನು ತಿಳಿಸಿದರು.ಕ್ಯೂಆರ್ ಕೋಡ್ ಬಳಸಿ ಸಹಿ ಹಾಕುವ ವ್ಯವಸ್ಥೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಸಹ ಚಿಂತನೆ ನಡೆಸಲಾಗಿದ್ದು ಈ ಕುರಿತು ಶೀಘ್ರ ದಲ್ಲೇ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದರು.