ಬಳ್ಳಾರಿ –
ಹೌದು ಯಾರಿಗೂ ಯಾವ ಇಲಾಖೆಗೂ ಇಲ್ಲದ ಈ ಒಂದು ಅವೈಜ್ಞಾನಿಕವಾದ ವರ್ಗಾವಣೆಯ ಕಾನೂನುನಿಂದಾಗಿ ರಾಜ್ಯದ ಶಿಕ್ಷಕರು ಸಾಕಷ್ಟು ಬೇಸತ್ತಿದ್ದು ತಂದೆ ತಾಯಿ ಬಂಧು ಬಳಗ ಊರು ಹೆಂಡತಿ ಮಕ್ಕಳು ಹೀಗೆ ಎಲ್ಲರನ್ನೂ ಒಂದೊಂದು ದಿಕ್ಕಿಗೆ ಬಿಟ್ಟು ಸೇವೆಗೆ ಸೇರಿಕೊಂಡಾಗಿನಿಂ ದಾಗಿ ಈವರೆಗೆ ಕರ್ತವ್ಯವನ್ನು ಮಾಡುತ್ತಿದ್ದು ಇನ್ನೂ ಇದೇ ಒಂದು ವರ್ಗಾವಣೆ ಸಿಗದೇ ರಾಜ್ಯದಲ್ಲಿ ಶಿಕ್ಷಕಿಯೊಬ್ಬರು ಪ್ರಾಣವನ್ನು ಕಳೆದುಕೊಂಡಿದ್ದಾರೆ ಹೌದು ಹೆಸರು ಶ್ರೀಮತಿ ರಾಜೇಶ್ವರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸ ದರೋಜಿ ಬಳ್ಳಾರಿ ಜಿಲ್ಲೆಯ ಸೊಂಡೂರು ತಾಲ್ಲೂಕಿನ ಈ ಒಂದು ಶಾಲೆಯಲ್ಲಿ ಸಹ ಶಿಕ್ಷಕಿಯಾಗಿ ಕರ್ತವ್ಯವನ್ನು ಮಾಡುತ್ತಿದ್ದು ರಾಜೇಶ್ವರಿ ಅವರು ಖಾಲಿಯೊಂದರಿಂದ ಬಳಲುತ್ತಿದ್ದರು.
ಪ್ರತಿ ಹದಿನೈದು ದಿನಗಳಿಗೊಮ್ಮೆ ತಪ್ಪದೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದ ಇವರು ತಮ್ಮ ಊರಿಗೆ ವರ್ಗಾವಣೆಯನ್ನು ಕೇಳಿದ್ದರು.ವೈದ್ಯಕೀಯ ಪ್ರಕರಣದಲ್ಲಿ ವರ್ಗಾವಣೆ ಕೊಡಿ ಎಂದು ಕೇಳಿ ಕೇಳಿ ಮನವಿ ನೀಡಿದರು ಕೂಡಾ ಇಲಾಖೆಯ ಅಧಿಕಾರಿಗಳು ಸ್ಪಂದಿಸಿರಲಿಲ್ಲ ಹೀಗಾಗಿ ಅದರಲ್ಲಿಯೇ ಕರ್ತವ್ಯವನ್ನು ಮಾಡುತ್ತಿದ್ದ ಇವರು ಇಂದು ಚಿಕಿತ್ಸೆ ಫಲಿಸದೇ ನಿಧನರಾಗಿ ದ್ದಾರೆ.ವೈದ್ಯಕೀಯ ಪ್ರಕರಣದಲ್ಲಿ ವರ್ಗಾವಣೆಗಾಗಿ ಅರ್ಜಿ ಸಲ್ಲಸಿದರು ಕಠಿಣ ನಿಯಮದಿಂದಾಗಿ ಶ್ರೀಮತಿ ರಾಜೇಶ್ವರಿ ಅವರಿಗೆ ಅವಕಾಶವನ್ನು ನೀಡಲಿಲ್ಲ ಹೀಗಾಗಿ ಇಂದು ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ.
ಇಲಾಖೆಯ ಕಠಿಣ ನಿಯಮದಿಂದ ವರ್ಗಾವಣೆ ಸಿಕ್ಕಿರಲಿಲ್ಲ ಆದ ಕಾರಣ ಮಾರಣಾoತಿಕ ಖಾಯಿಲೆಯಿಂದ ಬಳಲು ತ್ತಿರುವ ವೈದ್ಯಕೀಯ ಪ್ರಕರಣಕ್ಕೆ ಯಾವುದೇ ನಿರ್ಬಂಧ ವಿಲ್ಲದೆ ವರ್ಗಾವಣೆಗೆ ಅರ್ಜಿ ಸಲ್ಲಿಸಲು ತಿದ್ದುಪಡಿ ತಂದು ಮಾನವೀಯತೆ ಮೆರೆಯುವಂತೆ ರಾಜ್ಯದ ಶಿಕ್ಷಕರು ಒತ್ತಾಯವನ್ನು ಮಾಡಿದ್ದಾರೆ ಹಾಗೇ ಇನ್ನಾದರೂ ಈ ಒಂದು ಪ್ರಕರಣವನ್ನು ಮುಂದಿಟ್ಟುಕೊಂಡು ಶೀಘ್ರದಲ್ಲೇ ರಾಜ್ಯದ ಶಿಕ್ಷಕರಿಗೆ ಒಮ್ಮೆಯಾದರೂ ಸ್ವಂತ ಜಿಲ್ಲೆಗೆ ವರ್ಗಾ ವಣೆಗೆ ಅವಕಾಶವನ್ನು ನೀಡುವಂತೆ ಒತ್ತಾಯವನ್ನು ಮಾಡಿದ್ದು ಇಲಾಖೆಯ ಅಧಿಕಾರಿಗಳು ಸಚಿವರು ಏನು ಮಾಡುತ್ತಾರೆ ಎಂಬೊದನ್ನು ಕಾದು ನೋಡಬೇಕಿದೆ.ಇನ್ನೂ ಮೃತರಾದ ಗುರುಮಾತೆಗೆ ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕ ಬಂಧುಗಳು ಭಾವಪೂರ್ಣ ನಮನ ಸಲ್ಲಿಸಿ ಸಂತಾಪ ವನ್ನು ಸೂಚಿಸಿದ್ದಾರೆ.