ಬೆಳಗಾವಿ –
ರಾಜ್ಯದಲ್ಲಿ ರಾಜ್ಯ ಸರ್ಕಾರ ಶಾಲೆಗಳಲ್ಲಿ ಆರಂಭ ಮಾಡಿರುವ ಮೊಟ್ಟೆ ವಿತರಣೆಯನ್ನು ವಿರೋಧಿಸಿ ಹಾಗೇ ನಿಷೇಧಕ್ಕೆ ಒತ್ತಾಯವನ್ನು ಮಾಡಿ ಬೆಳಗಾವಿ ಯಲ್ಲಿ ಮಠಾಧೀಶರು ಪ್ರತಿಭಟನೆ ಮಾಡಿದರು. ಹೌದು ಅಖಿಲ ಭಾರತ ಸಸ್ಯಹಾರಿಗಳ ಒಕ್ಕೂಟದಿಂದ ಮಠಾಧೀಶರು ಪ್ರತಿಭಟನೆ ಯನ್ನು ಮಾಡಿ ಒತ್ತಾಯವನ್ನು ಮಾಡಿದರು
ಗಂಗಾಮಾತಾಜಿ ಮತ್ತು ಚನ್ನಬಸವ ಆನಂದ ಸ್ವಾಮೀಜಿ ನೇತೃತ್ವದಲ್ಲಿ ಈ ಒಂದು ಪ್ರತಿಭಟನೆಯನ್ನು ಮಾಡಲಾ ಯಿತು.ಸಧ್ಯ ಬೆಳಗಾವಿ ಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು ಈ ಒಂದು ಹಿನ್ನೆಲೆಯಲ್ಲಿ ನಗರದಲ್ಲಿ ಮಠಾ ಧೀಶರು ಪ್ರತಿಭಟನೆ ಮಾಡಿದರು
ಬೆಳಗಾವಿ ಕನ್ನಡ ಸಾಹಿತ್ಯ ಭವನದ ಆವರಣದಲ್ಲಿ ಈ ಒಂದು ಪ್ರತಿಭಟನೆ ನಡೆಯಿತು.ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶವನ್ನು ವ್ಯಕ್ತಪಡಿಸಿದರು ಮಠಾಧೀಶರು.