This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

Sports News

ನಿಯೋಜನೆಗೊಂಡ ಶಿಕ್ಷಕರ ವರದಿ ಕೊಡಿ ಸುದ್ದಿ ಸಂತೆಯ ವರದಿ ಬೆನ್ನಲ್ಲೇ ಹೊರಬಿತ್ತು ಶಿಕ್ಷಣ ಇಲಾಖೆಯ ಆಯುಕ್ತರ ಮತ್ತೊಂದು ಖಡಕ್ ಆದೇಶ…..

WhatsApp Group Join Now
Telegram Group Join Now

ಬೆಂಗಳೂರು –

ರಾಜ್ಯದಲ್ಲಿ ಶಾಲೆಗಳು ಆರಂಭಗೊಂಡ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯಿಂದ ಬೇರೆ ಬೇರೆ ಇಲಾಖೆಗಳಿಗೆ ನಿಯೋಜನೆಗೊಂಡಿರುವ ಶಿಕ್ಷಕರನ್ನು ಮರಳಿ ಮಾತೃ ಸಂಸ್ಥೆ ಗೆ ನಿಯೋಜನೆ ಮಾಡುವಂತೆ ಈ ಹಿಂದೆ ಇಲಾಖೆಯ ಆಯುಕ್ತರು ಖಡಕ್ ಆದೇಶವನ್ನು ಮಾಡಿದ್ದರು.ಈ ಒಂದು ಆದೇಶದ ನಂತರ ಸಾಕಷ್ಟು ಪ್ರಮಾಣದಲ್ಲಿ ಶಿಕ್ಷಕರು ಪ್ರಭಾವ ಬಳಸಿ ಅಲ್ಲಿಯೇ ಉಳಿದುಕೊಂಡಿದ್ದರು.

ಈ ಒಂದು ವಿಚಾರ ಕುರಿತು ಸುದ್ದಿ ಸಂತೆ ನಿನ್ನೇಯಷ್ಟೇ ವಿಸ್ತ್ರತವಾದ ವರದಿಯೊಂದನ್ನು ಪ್ರಕಟ ಮಾಡಿತ್ತು. ಸಾಕಷ್ಟು ಪ್ರಮಾಣದಲ್ಲಿ ಬೆಳಕು ಚೆಲ್ಲಿತ್ತು ಇದರ ಬೆನ್ನಿಗೆ ಈಗ ಇಲಾಖೆಯ ಆಯುಕ್ತರು ಮತ್ತೊಂದು ಆದೇಶವನ್ನು ಮಾಡಿದ್ದಾರೆ

https://suddisante.com/education-comishanar-order-no-use/

ಹೌದು ಈ ಒಂದು ವಿಚಾರವನ್ನು ಇಲಾಖೆಯ ಆಯುಕ್ತರು ಗಂಭೀರವಾಗಿ ಪರಿಗಣಿಸಿ ಮತ್ತೊಂದು ಖಡಕ್ ಆದೇಶ ವನ್ನು ಮಾಡಿದ್ದಾರೆ.

ಇಲಾಖೆಯ ಆಯುಕ್ತರಾದ ಆರ್ ವಿಶಾಲ್ ಅವರು ಇದನ್ನು ಗಂಭೀರವಾಗಿ ಪರಿಗಣಿಸಿದ್ವಾರೆ.ಈ ಹಿಂದೆ ಆದೇಶ ಹೊರಡಿಸಿ ಇಷ್ಟು ದಿನ ಕಳೆದರು ಕೂಡಾ ಈವರೆಗೆ ಬಹುತೇಕ ಪ್ರಮಾಣದಲ್ಲಿ ಮರಳಿ ಬಾರದೇ ಇರೊದು ಬೆಳಕಿಗೆ ಬಂದಿದೆ.ಆಯುಕ್ತರು ವಿವರಣಾತ್ಮಕ ಅಧಿಕೃತ ಜ್ಞಾಪನಾ ಪತ್ರ ಹೊರಡಿಸಿದ್ದರೂ ಶಿಕ್ಷಣ ಸಚಿವರು ಮುಂದಿನ ಆದೇಶದವರೆಗೆ ಯಥಾಸ್ಥಿತಿ ಮುಂದುವರಿಸು ವಂತೆ ಸೂಚಿಸಿದ್ದರು.ಅದಕ್ಕೆ ಮಾರುತ್ತರ ನೀಡಿದ್ದ ಆಯು ಕ್ತರು ಸಂಯೋಜಕರ ನಿಯೋಜನೆ ರದ್ದುಪಡಿಸುವ ಅನಿವಾರ್ಯತೆ ಸ್ಪಷ್ಟಪಡಿಸಿದ್ದರು.ಆದರೂ ಅನೇಕ ತಾಲೂಕು ಗಳಲ್ಲಿ ಸಂಯೋಜಕರು ತಮ್ಮ ಪ್ರಭಾವ ಬಳಸಿ ನಿಯೋಜನೆ ರದ್ದು ಆದೇಶಕ್ಕೆ ಬ್ರೇಕ್ ಹಾಕಿದ್ದರು

ಇದರಿಂದ ಶಿಕ್ಷಣ ಇಲಾಖೆ ಆಯುಕ್ತರು ಮಾಡಿದ ಕಟ್ಟು ನಿಟ್ಟಿನ ಆದೇಶಕ್ಕೆ ಕವಡೆಕಾಸಿನ ಕಿಮ್ಮತ್ತು ಇಲ್ಲದಾಗಿದೆ. ಜೊತೆಗೆ ಅಧಿಕಾರಿ ಮತ್ತು ಶಿಕ್ಷಣ ಸಚಿವರ ನಡುವೆ ಹಗ್ಗ ಜಗ್ಗಾಟಕ್ಕೂ ಕಾರಣವಾಗಿದೆ ಹುದ್ದೆ ಖಾಲಿ,ನ್ಯಾಯಾಂಗ ನಿಂದನೆ, ಮಾತೃ ಇಲಾಖೆಯಲ್ಲಿ ಶಿಕ್ಷಕರ ಅವಶ್ಯಕತೆ, ಸಂಯೋಜಕರ ಹುದ್ದೆಗೆ ಸಿ.ಆರ್.ಪಿ./ಬಿ.ಆರ್.ಪಿ ಬಳಕೆ ಸೇರಿದಂತೆ ನಾನಾ ಕಾರಣಗಳನ್ನು ಉಲ್ಲೇಖಿಸಿ ಆಯುಕ್ತರು ಅನ್ಯ ಇಲಾಖೆಗೆ ನಿಯೋಜನೆಗೆ ತೆರಳಿದವರನ್ನು ವಾಪಸ್ ಕರೆಸಲು ಫರ್ವನು ಹೊರಡಿಸಿದ್ದರೂ ಪ್ರಯೋಜನವಾಗಿ ರಲಿಲ್ಲ.ಸಧ್ಯ ಈ ಹಿಂದೆ ಹೊರಡಿಸಿದ ಆದೇಶದಂತೆ ಎಷ್ಟು ಶಿಕ್ಷಕರು ಮರಳಿ ಮಾತೃ ಇಲಾಖೆಗೆ ಮರಳಿದ್ದಾರೆ ಈ ಕೂಡಲೇ ಸಮಗ್ರವಾಗಿ ಮಾಹಿತಿಯನ್ನು ನೀಡಲು ಪತ್ರವನ್ನು ಬರೆದಿದ್ದಾರೆ.ಮತ್ತೊಂದು ಬಾರಿ ಇಲಾಖೆ ಗೆ ಸೇರದೆ ದೂರ ಉಳಿದಿದ್ದವರಿಗೆ ಛಾಟಿ ಬೀಸಿದ್ದಾರೆ


Google News

 

 

WhatsApp Group Join Now
Telegram Group Join Now
Suddi Sante Desk