ಬೆಂಗಳೂರು –
ಶಿಕ್ಷಣ ಸಚಿವ ಬಿ ಸಿ ನಾಗೇಶ್ ನಾಳೆ ಮಹತ್ವದ ಸಭೆ ಕರೆದಿದ್ದಾರೆ.ಈಗಾಗಲೇ ರಾಜ್ಯದಲ್ಲಿನ ಶಿಕ್ಷಕರ ಸಮಸ್ಯೆ ಮತ್ತು ಬೇಡಿಕೆಗಳ ಕುರಿತಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದವರು ಮನವಿಯನ್ನು ಸಲ್ಲಿಸಿದ್ದರು.ಅಲ್ಲದೇ ಸಭೆಯನ್ನು ಕರೆಯುವಂತೆ ಆಗ್ರಹವನ್ನು ಮಾಡಿದ್ದರು.ಒತ್ತಾಯ ದ ಹಿನ್ನಲೆಯಲ್ಲಿ ಶಿಕ್ಷಣ ಸಚಿವರು ಸ್ಪಂದಿಸಿ ಕೊನೆಗೂ ಸಭೆಯನ್ನು ಕರೆದಿದ್ದಾರೆ.
ನಾಳೆ ಮಹತ್ವದ ಈ ಒಂದು ಸಭೆಯನ್ನು ಕರೆದಿದ್ದು ರಾಜ್ಯದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ಇಲಾಖೆಯ ಅಧಿಕಾರಿ ಗಳು ಸೇರಿದಂತೆ ಹಲವರು ಈ ಒಂದು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.ಇನ್ನೂ ಕಳೆದ ಹಲವು ದಿನಗಳಿಂ ದ ನಾಡಿನ ಶೈಕ್ಷಣಿಕ ವಲಯದಲ್ಲಿ ಶಿಕ್ಷಕರ ಸಮಸ್ಯೆ ಗಳು ಸಾಕಷ್ಟಿದ್ದು ಅದರಲ್ಲೂ ಶಿಕ್ಷಕರ ವರ್ಗಾವಣೆ ದೊಡ್ಡ ಸಮಸ್ಯೆಯಾಗಿದ್ದು ಈ ಕುರಿತಂತೆ ನಾಳೆ ಚರ್ಚೆಯಾಗಲಿದ್ದು ಇದರೊಂದಿಗೆ ಇನ್ನೂ ಹಲವಾ ರು ಸಮಸ್ಯೆಗಳಿದ್ದು ಇವುಗಳ ಬಗ್ಗೆ ನಾಳೆ ಚರ್ಚೆಯಾ ಗುತ್ತದೆನಾ ವರ್ಗಾವಣೆಯಲ್ಲಿ ಏನಾದರೂ ಬದಲಾ ವಣೆಯಾಗುತ್ತಾ
ಇದರೊಂದಿಗೆ ಏನಾದರೂ ಸಿಹಿ ಸುದ್ದಿ ಸಭೆಯಿಂದ ಸಿಗುತ್ತದೆನಾ ಎಂಬ ನಿರೀಕ್ಷೆಯಲ್ಲಿ ನಾಡಿನ ಶಿಕ್ಷಕ ರಿದ್ದು ಏನಾಗುತ್ತದೆ ಏನೋ ಎಂಬ ದೊಡ್ಡ ಆತಂಕ ಮನೆ ಮಾಡಿದೆ. ಒಟ್ಟಾರೆ ಏನೇ ಆಗಲಿ ನಾಳೆಯ ಸಭೆಯಿಂದಾದರೂ ಕಳದೆ ಹಲವು ವರ್ಷಗಳಿಂದ ನಾಡಿನ ಶಿಕ್ಷಕರಿಗೆ ದೊಡ್ಡ ತಲೆನೋವಾಗಿರುವ ವರ್ಗಾವಣೆಯಿಂದ ಮುಕ್ತಿ ಸಿಗಲಿ ಒಮ್ಮೆಯಾದರೂ ಅವರು ಕೇಳಿದ ಸ್ಥಳಕ್ಕೆ ವರ್ಗಾವಣೆ ಆಗಲಿ ಎಂಬೊದೆ ಸುದ್ದಿ ಸಂತೆಯ ಆಶಯವಾಗಿದ್ದು ಸಧ್ಯ ಎಲ್ಲರ ಚಿತ್ತ ನಾಳೆಯ ಸಭೆಯಲ್ಲಿ ನೆಟ್ಟಿದೆ.