ಬೆಂಗಳೂರು –
ವರ್ಗಾವಣೆಯ ನಿರೀಕ್ಷೆಯಲ್ಲಿರುವ ರಾಜ್ಯದ ಶಿಕ್ಷಕರಿಗೆ ಶಿಕ್ಷಣ ಇಲಾಖೆಯ ಆಯುಕ್ತ ಡಾ ಆರ್ ವಿಶಾಲ್ ಅವರು ತುರ್ತು ಸಂದೇಶವನ್ನು ಕಳಿಸಿ ದ್ದಾರೆ.ಹೌದು ತಂತ್ರಾಂಶದಲ್ಲಿ ಶಾಲಾವಾರು ಮಂಜೂರಾದ ಹುದ್ದೆಗಳು ಕರ್ತವ್ಯ ನಿರ್ವಹಿಸು ತ್ತಿರುವ ಶಿಕ್ಷಕರ ಹಾಗೂ ಖಾಲಿ ಹುದ್ದೆಗಳ ಮಾಹಿತಿ ಪರಿಶೀಲನೆಗಾಗಿ ವರ್ಗಾವಣಾ ತಂತ್ರಾಂಶದಲ್ಲಿ ಈಗಲೇ ಇರುವ ದತ್ತಾಂಶವನ್ನು ಬಿಡುಗಡೆ ಮಾಡಲಾಗಿದ್ದು
ಹೀಗಾಗಿ ಈ ಒಂದು ಪರಿಶೀಲನಾ ಕಾರ್ಯವನ್ನು ನವಂಬರ್ 30 ರ ಒಳಗಾಗಿ ವರದಿಯ ಕೊನೆಯ ಪುಟವನ್ನು ತಗೆದುಕೊಂಡು ಉಪನಿರ್ದೇಶಕ ರಿಂದ ದೃಢಿಕರಿಸಿ ತಂತ್ರಾಂಶದಲ್ಲಿ ಅಪ್ ಲೋಡ್ ಮಾಡುವಂತೆ ಆಯುಕ್ತರು ಸೂಚನೆಯನ್ನು ನೀಡಿದ್ದಾರೆ ಯಾವುದೇ ಕಾರಣಕ್ಕೂ ವಿಳಂಬ ವನ್ನು ಮಾಡದಂತೆ ಸಂದೇಶ ನೀಡಿದ್ದಾರೆ.
ಸುದ್ದಿ ಸಂತೆ ನ್ಯೂಸ್….