ರಾಯಚೂರು –
ಇಂದು ಸೇವಾವಧಿಯಲ್ಲಿ ಒಂದು ಬಾರಿ ಸ್ವಂತ ಜಿಲ್ಲೆಗೆ ವರ್ಗಾವಣೆ ನೀಡಲು ಬೆಂಗಳೂರು ಚಲೋ ಪೂರ್ವಭಾವಿ ಸಭೆಯನ್ನು ಯಾದಗಿರಿಯ ಲುಂಬಿಣಿ ಗಾರ್ಡನ್ನಲ್ಲಿ ಹಮ್ಮಿಕೊಳ್ಳಲಾಗಿತ್ತು.ಈ ಒಂದು ಸಭೆಯಲ್ಲಿ ಯಾದಗಿರಿ ಜಿಲ್ಲೆಯ ಎಲ್ಲಾ ತಾಲೂಕಿನ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವರ್ಗಾವಣೆ ಹೊಂದದೇ ಇರುವ ಬಗ್ಗೆ ತಮ್ಮ ನೋವನ್ನು ಹೇಳಿಕೊಂಡರು.
10 15 20 ವರ್ಷಗಳಿಂದ ಒಂದೇ ಜಿಲ್ಲೆಯಲ್ಲಿ ನಾಲ್ಕು ನೂರು ಐದುನೂರು ಕಿಲೋಮೀಟರ್ ದೂರದಿಂದ ತಮ್ಮ ಊರುಗಳಿಂದ ಇದ್ದು ಕುಟುಂಬ ಬಂಧು-ಬಳಗ ಎಲ್ಲವನ್ನು ಬಿಟ್ಟು ನೋವನ್ನು ಅನುಭವಿಸುತ್ತಿದ್ದೇವೆ. ಕಾರಣ ಸರಕಾರ ದವರು ನಮ್ಮ ನೋವಿಗೆ ಸ್ಪಂದಿಸಿ ಸೇವಾವಧಿಯಲ್ಲಿ ಒಂದು ಬಾರಿ ನಮ್ಮ ಸ್ವಂತ ಜಿಲ್ಲೆಗೆ ಬಯಸಿದ ಜಿಲ್ಲೆಗೆ ವರ್ಗಾವಣೆ ನೀಡಬೇಕೆಂದು ಕೇಳಿಕೊಂಡರು.
ನಮ್ಮ ಬೇಡಿಕೆಯನ್ನು ಈಡೇರಿಸಿದ ಹೋದರೆ ಮುಂದಿನ ದಿನಮಾನಗಳಲ್ಲಿ ಒಂದು ಉಗ್ರವಾದ ಹೋರಾಟವನ್ನು ಜನವರಿ ಮೊದಲನೇ ವಾರದಲ್ಲಿ ಬೆಂಗಳೂರಿನಲ್ಲಿ ಹಮ್ಮಿ ಕೊಳ್ಳಲು ತೀರ್ಮಾನಿಸಲಾಯಿತು.ಇದಕ್ಕೆ ಸಾಕಷ್ಟು ಸಿದ್ದತೆ ಯನ್ನು ವರ್ಗಾವಣೆಯಿಂದ ನೊಂದಿರುವ ರಾಜ್ಯದ್ಯಂತ ಶಿಕ್ಷಕರು ತಯಾರಿ ಮಾಡಿಕೊಂಡಿದ್ದಾರೆ.ಅದಕ್ಕಾಗಿ ಶಿಕ್ಷಕರಿಗೆ ತೊಂದರೆಯಾಗದ ರೀತಿಯಲ್ಲಿ ಒಂದು ಬಾರಿ ಸಂತ ಜಿಲ್ಲೆಗೆ ವರ್ಗಾವಣೆ ನೀಡಬೇಕಾಗಿ ಹಕ್ಕೊತ್ತಾಯ ಮಂಡಿಸುತ್ತೇವೆ.
ವರದಿ – ಮಹೇಶ್ ಮಡ್ಡಿ