ಚಿಕ್ಕಬಳ್ಳಾಪುರ –
ರಾಜ್ಯದಲ್ಲಿ 12 ರಿಂದ ರಿಂದ 13 ಸಾವಿರ ಶಿಕ್ಷಕರ ಕೊರತೆ ಇದ್ದು ಇದನ್ನು ನೀಗಿಸಲು ಶೀಘ್ರದಲ್ಲೇ ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದರು.ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು ರಾಜ್ಯದ ಶಾಲೆಗಳಲ್ಲಿ ಶಿಕ್ಷಕರ ಕೊರತೆ ತುಂಬಾ ಇದೆ.
ಆದರೆ ಮಕ್ಕಳ ಬೋಧನೆಗೆ ಈವರೆಗೆ ಯಾವುದೇ ರೀತಿಯಲ್ಲೂ ಕೊರತೆಯಾಗಲ್ಲ.ಇನ್ನೂ ಶಿಕ್ಷಕರ ಕೊರತೆ ನೀಗಿಸಲು ಅತಿಥಿ ಶಿಕ್ಷಕರ ನೇಮಕವನ್ನು ಮಾಡಿಕೊಳ್ಳಲಾಗುವುದು ಎಂದರು.
ಒಂದನೇ ತರಗತಿಯಿಂದ ಶಾಲೆ ತೆರೆಯಲು ಅತಿ ಶೀಘ್ರದಲ್ಲೇ ಈ ಒಂದು ಕ್ರಮ ಕೈಗೊಳ್ಳಲಾಗುವುದು ಎಂದರು. ಚಿಕ್ಕಬಳ್ಳಾಪುರ ನಗರ ಹೊರಹೊಲಯದ ಅಗಲಗುರ್ಕಿ ಗ್ರಾಮದ ಬಳಿ ಸಚಿವ ನಾಗೇಶ್ ಮಾತನಾಡಿದರು.ಅಗಲಗುರ್ಕಿ ಖಾಸಗಿ ಶಾಲೆಗೆ ಬೇಟಿ ನಂತರ ಮಾತನಾಡಿದ ಅವರು ಶಿಕ್ಷಕರ ಕೊರತೆಯಿಂದಾಗಿ ಈ ಒಂದು ನಿರ್ಧಾರಕ್ಕೆ ಬರಲಾ ಗಿದ್ದು ಕೂಡಲೇ ನೇಮಕಾತಿಗೆ ಸೂಚನೆ ನೀಡಲಾಗು ತ್ತದೆ ಎಂದರು.