ಯಾದಗಿರಿ –
ಜಾನುವಾರು ಕಳ್ಳರನ್ನು ಬಂಧನ ಮಾಡಿದ ಘಟನೆ ಯಾದಗಿರಿ ಯಲ್ಲಿ ನಡೆದಿದೆ ರಾತ್ರಿ ಸಮಯದಲ್ಲಿ ಹಸುಗಳನ್ನು ಕಳ್ಳತನ ಮಾಡುತ್ತಿದ್ದ ಖದೀಮರನ್ನು ಪೊಲೀಸರು ಬಂಧನ ಮಾಡಿದ್ದಾರೆ.ದನಗಳ್ಳರನ್ನು ಬಂಧಿಸಿದ ಯಾದಗಿರಿ ಪೊಲೀಸರು ಜೈಲಿಗೆ ಅಟ್ಟಿ ದ್ದಾರೆ.
ರಾತ್ರಿ ವೇಳೆ ಹಸುಗಳನ್ನು ಕಳ್ಳತನ ಮಾಡಿ ವಾಹನಗಳಲ್ಲಿ ಸಾಗಿಸುವಾಗ ಅರೆಸ್ಟ್ ಮಾಡ ಲಾಗಿದೆ.ಯಾದಗಿರಿ ಗ್ರಾಮಾಂತರ ಠಾಣೆಯ ಪೊಲೀಸರಿಂದ ಎಂಟು ಜನ ದನಗಳ್ಳರ ಅರೆಸ್ಟ್
ಯಾದಗಿರಿ ತಾಲೂಕಿನ ವೆಂಕಟೇಶ ನಗರ ಬಳಿ ದಾಳಿ ಮಾಡಿ ಬಂಧನ ಮಾಡಲಾಗಿದೆ.ದಾಳಿ ವೇಳೆ ಕರುಗಳು ಸೇರಿ 25 ಹಸುಗಳನ್ನ ರಕ್ಷಿಸಿದ್ದಾರೆ ಪೊಲೀಸರು.
ರಾತ್ರಿ ವೇಳೆ ಕಳ್ಳತನ ಮಾಡಿ ಕಸಾಯಿಖಾನೆಗೆ ಸಾಗಿಸುತ್ತಿದ್ದರು ಖದೀಮರು.ಯಾದಗಿರಿ ತಾಲೂಕಿನ ವನಗೇರ,ಯಡಹಳ್ಳಿ ಕಡೆ ಕಳ್ಳತನ ಮಾಡಿರುವ ಶಂಕೆ ವ್ಯಕ್ತಪಡಿಸಿದ್ದಾರೆ ಪೊಲೀಸರು
ಯಾದಗಿರಿಯಿಂದ ಕಲಬುರ್ಗಿ ಕಡೆ ಸಾಗಿಸುತ್ತಿದ್ದ ಖದೀಮರು.ಬಂಧಿತ ಎಂಟು ಜನ ದನಗಳ್ಳರು ಕಲಬುರ್ಗಿ ಜಿಲ್ಲೆಯ ಮೂಲದವರು.ನಾಲ್ಕು ಬೂಲೇರೋ ಪಿಕ್ಆಪ್ ವಾಹನದಲ್ಲಿ ಸಾಗಿಸುತ್ತಿದ್ದರು ಖದೀಮರು.ಯಾದಗಿರಿ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿ ದ್ದಾರೆ.
ಸುದ್ದಿ ಸಂತೆ ನ್ಯೂಸ್ ಯಾದಗಿರಿ.