ಬೆಂಗಳೂರು –
BSY ನಿರ್ಗಮಿತ ಮುಖ್ಯಮಂತ್ರಿಯಾಗುತ್ತಿದ್ದಂತೆ ಇತ್ತ ಯಡಿಯೂರಪ್ಪ ಅವಧಿಯಲ್ಲಿ ಸಿಎಂ, ಡಿಸಿಎಂ, ಸಚಿವರ ಆಪ್ತ ಶಾಖೆಗಳಲ್ಲಿ ಸ್ಥಳ ನಿಯುಕ್ತಿ, ನಿಯೋ ಜನೆ,ಒಪ್ಪಂದದ ಆಧಾರದ ಮೇಲೆ ಕರ್ತವ್ಯ ನಿರ್ವಹಿ ಸುತ್ತಿರುವ ಅಧಿಕಾರಿ,ನೌಕರರನ್ನು ಬಿಡುಗಡೆಗೊಳಿಸ ಲಾಗಿದೆ.ಹೌದು ಆಗಸ್ಟ್ 2ರ ಒಳಗಾಗಿ ತಮ್ಮ ಮಾತೃ ಇಲಾಖೆಗೆ ಕಾರ್ಯವರದಿ ಮಾಡಿಕೊಳ್ಳತಕ್ಕದ್ದು ಎಂದು ಸೂಚಿಸಲಾಗಿದೆ.
ಹೌದು ಸಧ್ಯ ಕಚೇರಿಗಳಲ್ಲಿ ಪ್ರಸ್ತುತ ಬಾಕಿ ಇರುವ ಎಲ್ಲ ಭೌತಿಕ ಕಡತಗಳನ್ನು ಸ್ವೀಕೃತಿ ಮತ್ತು ಇ-ಆಫೀ ಸ್ ಕಡತಗಳ ಸ್ವೀಕೃತಿಗಳನ್ನು ಪಡೆಯತಕ್ಕದ್ದು. ಕಚೇರಿ ಉಪಯೋಗಕ್ಕಾಗಿ ಒದಗಿಸಿರುವ ಲೇಖನಿ ಸಾಮಾಗ್ರಿಗಳು,ಗಣಕಯಂತ್ರಗಳು, ಪೀಠೋಪಕರ ಣಗಳು,ದೂರವಾಣಿ ಹಾಗೂ ಇತ್ಯಾದಿ ಸಾಮಾಗ್ರಿ ಗಳನ್ನು ಕೂಡಲೇ ಸಂಬಂಧಪಟ್ಟವರಿಗೆ ಹಿಂದಿರು ಗಿಸಿ ಸ್ವೀಕೃತಿ ಪಡೆಯತಕ್ಕದ್ದು. ಗುರುತಿನಚೀಟಿ ಹಾಗೂ ವಾಹನ ಪಾಸ್ ಇತ್ಯಾದಿ ಪಾಸ್ಗಳನ್ನು ಹಿಂದಿರುಗಿಸಬೇಕು ಎಂದು ನಿರ್ದೇಶಿಸಲಾಗಿದೆ.
ಇನ್ನೂ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿ ಸುತ್ತಿರುವ ಎಲ್ಲ ಅಧಿಕಾರಿ,ಸಿಬ್ಬಂದಿ ಆಗಸ್ಟ್ 2ರ ಒಳಗಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕಚೇರಿಗ ಳಿಂದ ಬಿಡುಗಡೆಗೊಳಿಸತಕ್ಕದ್ದು.ಗಣಕಯಂತ್ರ, ಪೀಠೋಪಕರಣಗಳು ಕಳೆದು ಹೋದಲ್ಲಿ ಸಂಬಂಧ ಪಟ್ಟ ಸಚಿವರ ಆಪ್ತ ಕಾರ್ಯದರ್ಶಿಗಳನ್ನು ಹೊಣೆ ಗಾರರನ್ನಾಗಿ ಮಾಡಲಾಗುವುದು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸರಕಾರದ ಜಂಟಿ ಕಾರ್ಯದರ್ಶಿ ಅನಂತ ಎನ್.ಕಾಸ್ಕರ್ ಸುತ್ತೋಲೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.