ರಾಯಚೂರು –
ಬೇಡ ಜಂಗಮ ಹೋರಾಟ ಜಂಗಮರು ಸಾಮಾಜಿಕವಾಗಿ ಮುಂದುವರೆದ ಜನಾಂಗವಾಗಿದ್ದರೂ,ಆರ್ಥಿಕವಾಗಿ ಅತ್ಯಂತ ಹಿಂದುಳಿದವರಾಗಿದ್ದೇವೆ.ಮೀಸಲಾತಿ ನೀಡು ವಂತೆ ಒತ್ತಾಯಿಸಿ ರಾಜಧಾನಿ ಬೆಂಗಳೂರಿನಲ್ಲಿ ಬಿ ಡಿ ಹಿರೇಮಠ ವಕೀಲ ನೇತೃತ್ವದಲ್ಲಿ ನಿರಂತರ ಹೋರಾಟ ನಡೆಯುತ್ತಿದ್ದರೂ ಸರ್ಕಾರ ಸ್ಪಂದನೆ ಮಾಡಿರುವುದನ್ನ ಖಂಡಿಸಿ ಬೇಡ ಜಂಗಮರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನಾ ಧರಣಿ ನಡೆಸಿ ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದ ಪ್ರತಿಭಟನಾ ಧರಣಿ ಯಲ್ಲಿ ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿ ಶಿವಾಚಾರ್ಯ ಸ್ವಾಮಿಜಿ ಹಾಗೂ ಕಿಲ್ಲೇ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮಿಜಿ ಭಾಗಿ ಯಾಗಿ ಬೆಂಬಲಿಸಿದರು.ಬೇಡ ಜಂಗಮ ಎಂದು ಸರ್ಕಾರ ಸರ್ಟಿಫಿಕೇಟ್ ನೀಡಿದರೆ ಬಡತನದಲ್ಲಿ ನೊಂದಿರುವ ಬೇಡ ಜಂಗಮರ ಜೀವನ ಸುಗಮವಾಗಿ ಸಾಗಲು ಅವಕಾಶ ನೀಡಿದಂತಾಗುತ್ತದೆ.
ಆದ್ದರಿಂದ ಸರ್ಕಾರ ನಮ್ಮ ಬೇಡಿಕೆಗೆ ಸಕರಾತ್ಮಕವಾಗಿ ಸ್ಪಂದಿಸಬೇಕೆಂದು ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರ ಗಳಲ್ಲಿ ಬಿ ಡಿ ಹಿರೇಮಠ ಅವರ ಹೋರಾಟ ವನ್ನ ಬೆಂಬಲಿಸಿ ಹೋರಾಟ ಮಾಡಿದ್ದೇವೆ.ಸರ್ಕಾರ ಕಣ್ತೆರೆದು ನಮ್ಮ ಮನವಿ ಆಲಿಸಲಿ ಎಂಬ ಒತ್ತಾಯ ಕೇಳಿ ಬಂದಿತು.