ಕಾರವಾರ –
ಶಾಲೆಯ ಬಾಡಿಗೆಯನ್ನು ಪಾವತಿಸದ ಹಿನ್ನಲೆಯಲ್ಲಿ ಬಿಇಓ ಕಚೇರಿಯನ್ನು ಜಪ್ತಿ ಮಾಡಿದ ಘಟನೆ ಕಾರವಾರದಲ್ಲಿ ನಡೆದಿದೆ.ಹೌದು ಭಟ್ಕಳದ ಮುಗ್ದುಮ್ ಕಾಲೋನಿಯ ಜಮಾತುಲ್ ಮುಸ್ಲಿಮಿನ್ನ ಕಟ್ಟಡದಲ್ಲಿನ ಸರ್ಕಾರಿ ಉರ್ದು ಪ್ರಾರ್ಥಮಿಕ ಶಾಲೆಯ ಕಟ್ಟಡವನ್ನು ಕಳೆದ 40 ವರ್ಷಗಳಿಂದ ನಡೆಯುತ್ತಿದ್ದು 20 ವರ್ಷಗಳಿಂದ ಬಾಡಿಗೆ ಬಾಕಿ ಉಳಿಸಿಕೊಂಡಿರುವುದರಿಂದ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು.ಈ ಕುರಿತಂತೆ ವಿಚಾರಣೆ ಮಾಡಿದ ನ್ಯಾಯಾಲಯ ಆದೇಶವನ್ನು ಮಾಡಿದ್ದು ಹೀಗಾಗಿ ಆದೇಶ ದಂತೆ ಭಟ್ಕಳದ ಬಿಇಒ ಕಚೇರಿಯ ಉಪಕರಣಗಳನ್ನು ನ್ಯಾಯಾಲಯದ ಸಿಬ್ಬಂದಿ ಜಪ್ತಿ ಮಾಡಿದರು.
ಮುಗ್ದುಮ್ ಕಾಲೋನಿಯಲ್ಲಿರುವ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯು 40 ವರ್ಷದಿಂದ ಬಾಡಿಗೆ ಕಟ್ಟಡ ದಲ್ಲಿ ನಡೆಯುತ್ತಿದ್ದು ಈ ಕಟ್ಟಡವು ಜಮಾತೆ ಮುಸ್ಲೀಮಿ ನ್ಗೆ ಸೇರಿದೆ.ಸುಮಾರು 20 ವರ್ಷದಿಂದ ಶಿಕ್ಷಣಾಧಿಕಾರಿ ಕಚೇರಿಯಿಂದ ಕಟ್ಟಡದ ಬಾಡಿಗೆ (ಸುಮಾರು 1.49 ಲಕ್ಷ) ಕಟ್ಟದ ಕಾರಣ ಜಮಾತೆ ಮುಸ್ಲೀಮಿನ್ ಕಾರ್ಯದರ್ಶಿ 2005 ರಲ್ಲಿ ಜೆಎಂಎಫ್ಸಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.ಅದರಂತೆ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಬಿಇಓ ಕಛೇರಿಯಲ್ಲಿನ ಉಪಕರಣಗಳನ್ನು ಜಪ್ತಿ ಮಾಡುವಂತೆ ಸೆಪ್ಟೆಂಬರ್ 14 ರಂದು ಆದೇಶ ಹೊರಡಿಸಿತ್ತು.ಅದರಂತೆ ತಾಲೂಕಿನ ಜೆಎಮ್ಎಫ್ಸಿ ನ್ಯಾಯಾಲಯದ ಬಿಲಿಫ್ ಗಣಪತಿ ಬಿಇಓ ಕಛೇರಿಗೆ ಬಂದು ನ್ಯಾಯಲಯದ ವಾರಂಟ್ ಹೊರಡಿಸಿ ಜಪ್ತಿ ನಿಯಮ ಜಾರಿಗೆ ಮಾಡಿ ವಸ್ತುಗಳನ್ನು ಜಪ್ತಿ ಮಾಡಿಕೊಂಡರು
9 ಕಂಪ್ಯೂಟರ್, 66 ಫೈಬರ್ ಚೇರ್, 26 ಕುರ್ಚಿ, 26 ಟೇಬಲ್, ಒಂದು ವಾಹನ ಹಾಗೂ 2 ಮೆಟಲ್ ಟೇಬಲ್ ಅನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಕಾಲಾವಕಾಶ ಕೇಳಿದ ಶಿಕ್ಷಣಾಧಿಕಾರಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದ ಮುಗ್ದುಮ್ ಕಾಲೋನಿಯ ಜಮಾತುಲ್ ಮುಸ್ಲಿಮಿನ್ ಅಧ್ಯಕ್ಷ, ಕಾರ್ಯದರ್ಶಿ, ಸದಸ್ಯರು ಕೂಡ ಜಪ್ತಿಯ ವೇಳೆ ಬಿಇಒ ಕಚೇರಿಗೆ ಬಂದಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ ಈ ವೇಳೆ ಅವರ ಬಳಿ ಒಂದು ತಿಂಗಳ ಕಾಲಾವಕಾಶ ಕೇಳಿದರು.ನ್ಯಾಯಾ ಲಯದ ಆದೇಶಕ್ಕೆ ವಿರುದ್ಧವಾಗಿ ನಾವು ನಡೆದುಕೊಳ್ಳಲು ಸಾಧ್ಯವಿಲ್ಲ.ಜಪ್ತಿಯ ಆದೇಶದಂತೆ ನಮಗೆ ಸಿಗಬೇಕಾದ ಹಣ ನೀಡಬೇಕು. ಇದಕ್ಕೆ ನ್ಯಾಯಾಲಯದ ಆದೇಶದಂತೆ ಮುಂದುವರೆಯಲಿ ಎಂದು ಜಮಾತುಲ್ ಮುಸ್ಲಿಮಿನ್ ಅಧ್ಯಕ್ಷ ಸಾದಿಕ್ ಮಟ್ಟಾ ತಿಳಿಸಿದರು.