ಬೆಂಗಳೂರು –
7ನೇ ವೇತನ ಆಯೋಗದ ನಿರೀಕ್ಷೆಯಲ್ಲಿದ್ದ ರಾಜ್ಯ ಸರ್ಕಾರಿ ನೌಕರಿಗೆ ಬಿಗ್ ಶಾಕ್ – ಮತ್ತೆ ನಿರಾಶೆ ಮೂಡಿಸಿದೆ ರಾಜ್ಯ ಸರ್ಕಾರದ ನಡೆ….. 7ನೇ ವೇತನ ಆಯೋಗದ ನಿರೀಕ್ಷೆಯಲ್ಲಿದ್ದ ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಿದೆ.ಹೌದು ಈಗಷ್ಟೇ ರಾಜ್ಯದ ಸರ್ಕಾರಿ ನೌಕರರಿಗೆ ಮೊನ್ನೆ ಮೊನ್ನೆಯಷ್ಟೇ ತುಟ್ಟಿ ಭತ್ಯೆ ಯನ್ನು
ಹೆಚ್ಚಿಸಿದ ಬೆನ್ನಲ್ಲೇ ಶೀಘ್ರದಲ್ಲೇ 7ನೇ ವೇತನ ಆಯೋಗ ವರದಿ ನೀಡಿದ ಕೂಡಲೇ ಅದನ್ನು ಜಾರಿಗೆ ತರೋದಾಗಿ ಮುಖ್ಯಮಂತ್ರಿ ಸೇರಿದಂತೆ ಎಲ್ಲರೂ ಹೇಳಿದ್ದರು.ಇದರ ಬೆನ್ನಲ್ಲೇ ಈಗ ಮತ್ತೊಂದು ಶಾಕ್ ಎದುರಾಗಿದೆ.ಹೌದು ರಾಜ್ಯ ಸರ್ಕಾರಿ ನೌಕರರಿಗೆ ಬಿಗ್ ಶಾಕ್ ಎದುರಾಗಿದ್ದು ಈ ಬಾರಿ ದೀಪಾವಳಿಗೆಯಾದರೂ ಕೇಂದ್ರ ಸರ್ಕಾರಿ ನೌಕರರ ಹಾಗೆ ನಮಗೂ 7 ನೇ ವೇತನ ಆಯೋಗದ ವೇತನ ಕೈ ಸೇರುತ್ತದೆ ಎಂದುಕೊಂ ಡಿದ್ದವರಿಗೆ ರಾಜ್ಯ ಸರ್ಕಾರ ಸದ್ದಿಲ್ಲದೇ ದೊಡ್ಡ ಶಾಕ್ ನೀಡಿದೆ.
ಅದ್ಯಾಕೋ ಏನೋ 7ನೇ ವೇತನ ಆಯೋಗದ ವರದಿ ಸಿದ್ದತೆ ಎಲ್ಲವೂ ಮುಕ್ತಾಯವಾಗಿದ್ದು ಇನ್ನೇನು ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ ಎಂಬ ಸುದ್ದಿಯ ನಡುವೆ ಆಯೋಗದ ಅವಧಿ ಯನ್ನು ರಾಜ್ಯ ಸರ್ಕಾರ ಮತ್ತೆ ವಿಸ್ತರಣೆಯನ್ನು ಮಾಡಿದೆ ಹೀಗಾಗಿ ದೀಪಾವಳಿ ಹಬ್ಬದ ಸಮಯ ದಲ್ಲಿ ನಮಗೂ ಕೂಡಾ ಈ ಬಾರಿ 7ನೇ ವೇತನ ಆಯೋಗದ ವೇತನ ಜಾರಿಯಾಗುತ್ತದೆ ಎಂದು ಕೊಂಡಿದ್ದ ರಾಜ್ಯದ ಸರ್ಕಾರಿ ನೌಕರರಿಗೆ ಮತ್ತೊಂದು ಆತಂಕ ಎದುರಾಗಿದೆ.
ಸಧ್ಯ ರಾಜ್ಯ ಸರ್ಕಾರ 7ನೇ ವೇತನ ಆಯೋಗದ ಅವಧಿಯನ್ನು ಮತ್ತೆ 6 ತಿಂಗಳ ಕಾಲ ವಿಸ್ತರಣೆ ಯನ್ನು ಮಾಡಿ ಆದೇಶವನ್ನು ಮಾಡಿದೆ ಹೀಗಾಗಿ ಯಾವಾಗ ನಮಗೂ7ನೇ ವೇತನ ಆಯೋಗ ಎಂಬ ಚಿಂತೆಯಲ್ಲಿ ರಾಜ್ಯದ ಸಮಸ್ತ ಸರ್ಕಾರಿ ನೌಕರರು ಇದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..