ಕುಷ್ಟಗಿ –
ಕೆಟ್ಟು ನಿಂತ ಬಸ್ಸಿಗೆ ಬೈಕ್ ವೊಂದು ಡಿಕ್ಕಿಯಾದ ಪರಿಣಾಮವಾಗಿ ಮುಖ್ಯ ಶಿಕ್ಷಕರೊಬ್ಬರು ಸ್ಥಳ ದಲ್ಲೇ ಸಾವಿಗೀಡಾದ ಘಟನೆ ಕೊಪ್ಪಳದಲ್ಲಿ ನಡೆದಿದೆ.ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮೃತಪಟ್ಟವರಾಗಿದ್ದು ಕುಷ್ಟಗಿ ಪಟ್ಟಣದ ಬಳಿ ಈ ಒಂದು ಧಾರುಣ ಘಟನೆ ನಡೆದಿದೆ.
ಕುಷ್ಟಗಿ ತಾಲೂಕಿನ ಟಕ್ಕಳಕಿ ಗ್ರಾಮದ ನಿವಾಸಿ ಶೇಖರಪ್ಪ ನಾಗಪ್ಪ ಕಟೀಗಾರ್ (54) ಮೃತಪ ಟ್ಟಿದ್ದು ಶೇಖರಪ್ಪ ಅವರು ಕನಕಗಿರಿ ತಾಲೂಕು ಮುಸಲಾಪೂರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಎಂದಿನಂತೆ ಶಾಲೆಯ ಕೆಲಸ ಮುಗಿಸಿ ಕುಷ್ಟಗಿಗೆ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಕುಷ್ಟಗಿ ಪಟ್ಟ ಣದ ಸಮೀಪದ ಸೋಲಾರ ಪ್ಲಾಂಟ್ ಬಳಿ ಕೆಟ್ಟು ನಿಂತ ಸರ್ಕಾರಿ ಬಸ್ಸಿಗೆ ಬೈಕ್ ಡಿಕ್ಕಿಯಾಗಿದೆ.
ಹೆಲ್ಮೇಟ್ ಹಾಕದೇ ಸವಾರ ಪ್ರಯಾಣಿಸಿದ್ದರ ಪರಿಣಾಮ ತಲೆಗೆ ತೀವ್ರ ಗಾಯಗೊಂಡು ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಕುಷ್ಟಗಿ ಸರ್ಕಾರಿ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ಬಳಿಕ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಾ ಗಿದ್ದು ಮೃತ ಮುಖ್ಯ ಶಿಕ್ಷಕ ಶೇಖರಪ್ಪ ಅವರು,ಪತ್ನಿ ಇಬ್ಬರು ಪುತ್ರರು ಓರ್ವ ಪುತ್ರಿಯನ್ನು ಅಗಲಿದ್ದಾರೆ
ಮುಖ್ಯ ಶಿಕ್ಷಕರ ಅಕಾಲಿಕ ನಿಧನಕ್ಕೆ ಮುಸಲಾ ಪೂರ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು ಜಿಲ್ಲೆಯ ಸಮಸ್ತ ಶಿಕ್ಷಕ ಬಂಧುಗಳು ಹಾಗೇ ರಾಜ್ಯದ ಸಮಸ್ತ ಶಿಕ್ಷಕರು ತೀವ್ರವಾದ ಸಂತಾಪ ವನ್ನು ಸೂಚಿಸಿ ಕಂಬನಿ ಮಿಡಿದಿದ್ದಾರೆ ಇನ್ನೂ ಇತ್ತ ಈ ಒಂದು ವಿಚಾರ ಕುರಿತಂತೆ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.