ಆಂಕರ್ –
ಸಿಡಿಲುಬಡಿದು ಬೈಕ್ ಸವಾರನೊಬ್ಬ ಸ್ಧಳದಲ್ಲೇ ಸಾವಿಗೀಡಾದ ಘಟನೆ ಕುಂದಗೋಳದಲ್ಲಿ ನಡೆದಿದೆ.ಬೈಕ್ ನಲ್ಲಿ ಸವಾರಿ ಮಾಡುತ್ತಿದ್ದಾಗ ಅಪ್ಪಳಿಸಿದೆ ಬರಸಿಡಿಲು.ಕುಂದಗೋಳ ತಾಲೂಕಿನ ಸಂಶಿ ಮತ್ತು ಪಶುಪತಿಹಾಳ ಮಾರ್ಗ ಮಧ್ಯೆ ಈ ಒಂದು ಅವಘಡ ನಡೆದಿದೆ.
ಪ್ರವೀಣ್ ಬಡಿಗೇರ(32) ಮೃತ ಯುವಕನಾಗಿ ದ್ದಾನೆ.ಮೃತ ಪ್ರವೀಣ್ ಪಶುಪತಿಹಾಳದ ನಿವಾಸಿಯಾಗಿದ್ದು ಹುಬ್ಬಳ್ಳಿ ಖಾಸಗಿ ಟ್ರಾನ್ಸ್ ಪೋರ್ಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರವೀಣ್.ಕೆಲಸವನ್ನು ಮುಗಿಸಿಕೊಂಡು ಬೈಕ್ ಮೇಲೆ ವಾಪಸ್ ಮನೆಗೆ ತೆರಳುವಾಗ ಈ ಒಂದು ಧಾರುಣ ಘಟನೆ ನಡೆದಿದೆ.ಸಿಡಿಲಿನ ಹೊಡೆತಕ್ಕೆ ಸ್ಥಳದಲ್ಲೇ ಪ್ರವೀಣ್ ರಸ್ತೆ ಪಕ್ಕದಲ್ಲಿಯೇ ಬಿದ್ದು ಮೃತಪಟ್ಟಿದ್ದಾನೆ.ಇನ್ನೂ ಈ ಒಂದು ಸುದ್ದಿಯನ್ನು ತಿಳಿದ ಕುಂದಗೋಳ ಪೊಲೀಸರು ಸ್ಥಳಕ್ಕೇ ಭೇಟಿ ನೀಡಿ ಪರಿಶೀಲನೆ ಮಾಡಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.