ಲಕ್ನೋ –
ಹೌದು ಬೆಳಕಿನ ಹಬ್ಬ ದೀಪಾವಳಿಯ ಸಮಯ ದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜ್ಯದ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ ನೊಂದಿಗೆ ಹಲವಾರು ಬೋನಸ್ ನ್ನು ನೀಡಿ ಘೋಷಣೆ ಮಾಡಿದ್ದಾರೆ ಸರ್ಕಾರಿ ನೌಕರರಿಗೆ ಡಿಎ ಹೆಚ್ಚಿಸಿರುವ ಹಲವು ರಾಜ್ಯಗಳ ಪಟ್ಟಿಗೆ ಈಗ ಉತ್ತರಪ್ರದೇಶ ಕೂಡಾ ಇದರೊಂದಿಗೆ ಸೇರಿಕೊಂಡಿದೆ.
ಇಲ್ಲಿನ ಎಲ್ಲಾ ಸರ್ಕಾರಿ ನೌಕರರಿಗೂ ದೀಪಾವಳಿ ಉಡುಗೊರೆಯಾಗಿ ತುಟ್ಟಿಭತ್ಯೆ ಮತ್ತು ಬೋನಸ್ ಅನ್ನು ಕೊಡಲಾಗಿದೆ.ಸಿಎಂ ಯೋಗಿ ಆದಿತ್ಯ ನಾಥ್ ಈ ಬಗ್ಗೆ ಟ್ವೀಟ್ ಮಾಡಿದ್ದು ಶೇ.4ರಷ್ಟು ಡಿಎ ಹೆಚ್ಚಿಸುವುದಾಗಿ ತಿಳಿಸಿದ್ದಾರೆ ಹಾಗೆಯೇ ಎಲ್ಲಾ ನೌಕರರಿಗೂ ಸಮಾನವಾಗಿ ಬೋನಸ್ ಪ್ರಕಟಿಸಿದ್ದಾರೆ.
ಈ ಮುಂಚೆ ಶೇ. 34ರಷ್ಟು ತುಟ್ಟಿಭತ್ಯೆ ಸಿಗುತ್ತಿತ್ತು ಈಗ ಅದನ್ನು ಶೇ.38ಕ್ಕೆ ಹೆಚ್ಚಿಸಲಾಗಿದೆ ಇನ್ನು, ಪ್ರತಿಯೊಬ್ಬರಿಗೂ ಸಮಾನವಾಗಿ 6,908 ರೂಗಳ ಬೋನಸ್ ಕೂಡ ಸಿಗುತ್ತಿದೆ ಡಿಎ ಹೆಚ್ಚಳವು ಜುಲೈ 1 ರಿಂದ ಅನ್ವಯವಾಗಲಿದೆ