ಬೆಂಗಳೂರು –
ಹೌದು 7ನೇ ವೇತನ ಆಯೋಗ ವಿಚಾರ ದಲ್ಲಿ ರಾಜ್ಯ ಸರ್ಕಾರ ದಿಂದ ಆದೇಶವಾದ ಬೆನ್ನಲ್ಲೇ ಸಮಿತಿ ಇತ್ತ ಚಟುವಟಿಕೆಗಳನ್ನು ಆರಂಭ ಮಾಡಿದೆ 7ನೇ ವೇತನ ಆಯೋಗದ ಅಧ್ಯಕ್ಷರು ನೂತನ ಸದಸ್ಯರೊಂದಿಗೆ ಮಹತ್ವದ ಸಭೆ ಕರೆದು ಹಲವಾರು ವಿಚಾರ ಗಳ ಕುರಿತು ಕಾರ್ಯ ಚಟುವಟಿಕೆ ಗಳ ಕುರಿತು ಮಹತ್ವದ ಚರ್ಚೆ ಯನ್ನು ಮಾಡಿದರು ಸುಧಾಕರ್ ರಾವ್ ರವರು
7ನೇ ವೇತನ ಆಯೋಗ ವಿಚಾರ ಕುರಿತಂತೆ ಸಮಿತಿ ರಚನೆಗೆ ಕೊನೆಗೂ ರಾಜ್ಯ ಸರ್ಕಾರ ಅಧಿಕೃತವಾದ ಆದೇಶವನ್ನು ಹೊರಡಿಸಿದ್ದು ಈ ಒಂದು ಆದೇಶವು ಅತ್ತ ಹೊರಬೀಳುತ್ತಿದ್ದಂತೆ ಇತ್ತ ಈ ಒಂದು ಸಮಿತಿಯ ನೂತನ ಅಧ್ಯಕ್ಷರಾ ಗಿರುವ ನಿವೃತ್ತ ಐಎಎಸ್ ಅಧಿಕಾರಿ ಸುಧಾಕರ್ ರಾವ್ ಅವರು ಪುಲ್ ಆಕ್ಟಿವ್ ಆಗಿದ್ದಾರೆ.ಹೌದು ಹೆಸರನ್ನು ಘೋಷಣೆ ಮಾಡಿದ ನಂತರ ಒಂದಿಷ್ಟು ಕಾರ್ಯ ಚಟುವಟಿಕೆ ಆರಂಭ ಮಾಡಿ ಇಂದು ಸಮಿತಿಯ ನೂತನ ಸದಸ್ಯರೊಂದಿಗೆ ಸಭೆಯನ್ನು ಮಾಡಿದರು
ಹೆಸರನ್ನು ಘೋಷಣೆ ಮಾಡಿದ ನಂತರ ಸೈಲಂಟ್ ಆಗಿದ್ದ ಅಧ್ಯಕ್ಷರು ರಾಜ್ಯ ಸರ್ಕಾರದಿಂದ ಆದೇಶ ಬರುತ್ತಿದ್ದಂತೆ ಮತ್ತೆ ಕಾರ್ಯ ಚಟುವಟಿಕೆಗಳನ್ನು ಆರಂಭ ಮಾಡಿದ್ದಾರೆ.ಸಮಿತಿಗೆ ಸದಸ್ಯರಾಗಿ ಆಯ್ಕೆಯಾಗಿರುವ ಮೂಲ ಸೌಕರ್ಯ ಇಲಾಖೆಯ ಜಂಟಿ ಕಾರ್ಯರ್ಶಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರನ್ನು ಆಯೋಗದ ಸದಸ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದ್ದು. ನಿವೃತ್ತ ಐಎಎಸ್ ಅಧಿಕಾರಿ ಪಿ.ಬಿ.ರಾಮಮೂರ್ತಿ ಮತ್ತು ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ನಿವೃತ್ತ ಪ್ರಧಾನ ನಿರ್ದೇಶಕ ಶ್ರೀಕಾಂತ್ ಬಿ.ವನಹಳ್ಳಿ ಅವರನ್ನು ಆಯೋಗದ ಸದಸ್ಯರನ್ನಾಗಿ ನೇಮಕ ಮಾಡಲಾಗಿದ್ದು ಇವರೊಂದಿಗೆ ಸಭೆಯನ್ನು ಮಾಡಿದರು
ಇವರೊಂದಿಗೆ ಅಧ್ಯಕ್ಷರು ಬೆಂಗಳೂರಿನಲ್ಲಿ ಮಹತ್ವದ ಸಭೆಯನ್ನು ಮಾಡಿ.ಸಧ್ಯ ಈ ಒಂದು ಸಮಿತಿಗೆ ವರದಿಯನ್ನು ನೀಡೊದು ದೊಡ್ಡ ಕೆಲಸವಾಗಿದ್ದು ಹೀಗಾಗಿ ಸಾಲು ಸಾಲು ಚುನಾ ವಣೆಗಳು ಬರುವ ಹಿನ್ನಲೆಯಲ್ಲಿ ಹೀಗಾಗಿ ಸರ್ಕಾರ ನೀಡಿರುವ ಕಾಲ ಮೀತಿಯೊಳಗಾಗಿ ವರದಿಯನ್ನು ನೀಡೊದು ಸವಾಲಾಗಿದ್ದು ಇದರಿಂದಾಗಿ ಇಂದು ಅಧ್ಯಕ್ಷರು ತುರ್ತಾಗಿ ಸಮಿತಿಯ ಸದಸ್ಯರೊಂದಿಗೆ ಸಭೆಯನ್ನು ಮಾಡಿದರು.ಕಾರ್ಯತಂತ್ರದ ಬಗ್ಗೆ ಹಾಗೆ ಇನ್ನಿತರ ಮುಂದಿನ ಹಂತದ ಕಾರ್ಯಕ್ರಮ ಗಳ ಕುರಿತು ಸುಧೀರ್ಘ ವಾಗಿ ಚರ್ಚೆ ಮಾಡಿ ಶೀಘ್ರದಲ್ಲೇ ವರದಿ ಸಿದ್ದ ಮಾಡುವ ಕುರಿತು ಪ್ಲಾನ್ ಮಾಡಿದರು
ಹಾಗೇ ಇದರೊಂದಿಗೆ ಬೇಗ ಬೇಗ ದಾಖಲೆ ಗಳನ್ನು ತೆಗೆದುಕೊಂಡು ನಂತರ ವರದಿ ಸಿದ್ದ ಮಾಡಿ ರಾಜ್ಯ ಸರ್ಕಾರಕ್ಕೆ ಸಲ್ಲಿಸುವ ಕುರಿತು ಹಾಗೆ ವಿಳಂಬ ಮಾಡದೇ ರಾಜ್ಯದ ಸಮಸ್ತ ಸರ್ಕಾರಿ ನೌಕರರ ಅನುಕೂಲ ಆಗುವ ನಿಟ್ಟಿನಲ್ಲಿ ಕೂಡಲೇ ಯೋಜನೆ ವರದಿ ನೀಡಲು ಒಪ್ಪಿಗೆ ನೀಡಲಾಯಿತು
ಸುದ್ದಿ ಸಂತೆ ನ್ಯೂಸ್