ಯಾದಗಿರಿ –
ಶಿಕ್ಷಕರನ್ನ ನೇಮಿಸೋದು ಪಾಠ ಮಾಡೋದಕ್ಕೆ ಸಂಸಾರ ನೋಡಲಿಕ್ಕಲ್ಲ ಎಂದು ಹೇಳಿಕೆ ನೀಡಿರುವ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಈ ಒಂದು ಹೇಳಿಕೆಯನ್ನು ನೀಡಿರುವ ಶಿಕ್ಷಣ ಸಚಿವ ಬಿ ಸಿ ನಾಗೇಶ್ ವಿರುದ್ದ ರಾಜ್ಯದ ಶಿಕ್ಷಕರು ಈಗ ಸಿಡಿದೆದ್ದಿದ್ದಾರೆ. ಹೌದು ಇವರ ಹೇಳಿಕೆಯನ್ನು ಖಂಡಿಸಿ ಯಾದಗಿರಿ ಯ ಸೈದಾಪೂರ ವಲಯ ಶಿಕ್ಷಕರು ಪ್ರತಿಭಟನೆ ಮಾಡಿದರು
ಹೌದು ಕಳೆದ ವಾರವಷ್ಟೇ ಶಿಕ್ಷಣ ಸಚಿವರು ಈ ಒಂದು ಹೇಳಿಕೆ ನೀಡಿದ್ದು ಇದನ್ನು ಖಂಡಿಸಿ ಶಿಕ್ಷಕರು ಯಾದಗಿರಿ ಯಲ್ಲಿ ಪ್ರತಿಭಟನೆ ಮಾಡಿ ಆಕ್ರೋಶವನ್ನು ವ್ಯಕ್ತಪಡಿಸಿದರು
ನಾವು ಕೂಡಾ ಸಂಸಾರಿಗಳೇ ಸ್ವಾಮಿ ನಮಗೂ ಸಂಸಾರ ಮಕ್ಕಳು ತಂದೆ ತಾಯಿ ಬಂಧು ಬಳಗ ಹೀಗೆ ನಿಮ್ಮ ಹಾಗೇ ಎಲ್ಲವೂ ಇದೆ ಎನ್ನುತ್ತಾ ಹೇಳಿಕೆಯನ್ನು ಖಂಡಿಸಿ ಆಕ್ರೋಶ ವನ್ನು ವ್ಯಕ್ತಪಡಿಸಿದರು.