ಬೆಂಗಳೂರು –
ಶಿಕ್ಷಕರ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆ ಮಾಡಿ ಮುಂದಿನ ಹೋರಾಟದ ರೂಪ ರೇಷೆಗಳ ಕುರಿತು ತೀರ್ಮಾನ ತೆಗೆದುಕೊಳ್ಳಲು ಸರ್ಕಾರಿ ನೌಕರರ ರಾಜ್ಯಾಧ್ಯಕ್ಷ ಷಡಕ್ಷಾರಿ ಅವರು ಕರೆದ ಸಭೆಗೆ ರಾಜ್ಯದ ಮೂಲೆ ಮೂಲೆಗಳಿಂದ ಅಪಾರ ಸಂಖ್ಯೆಯಲ್ಲಿ ಶಿಕ್ಷಕರು ಬೆಂಗಳೂರಿನತ್ತ ಬರುತ್ತಿದ್ದು ಇನ್ನೂ ಈಗಾಗಲೇ ನಗರಕ್ಕೆ ಬಂದಿದ್ದಾರೆ.
ಹೌದು ಷಡಕ್ಷಾರಿ ಅವರು ಕರೆದ ಸಭೆಗೆ ಈಗಾಗಲೇ ನಾಡಿನ ಶಿಕ್ಷಕರು ಸಾಕಷ್ಟು ಪ್ರಮಾಣದಲ್ಲಿ ಬೆಂಬಲವನ್ನು ಸೂಚಿಸಿದ್ದು ಹೀಗಾಗಿ ಬಹುತೇಕ ಶಿಕ್ಷಕರು ಸಭೆಯಲ್ಲಿ ಪಾಲ್ಗೊಳ್ಳಲು ನಗರಕ್ಕೆ ಬಂದಿದ್ದಾರೆ
ಷಡಕ್ಷಾರಿ ಅವರಿಗೆ ಬೆಂಬಲವನ್ನು ನೀಡಿರುವ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ನಗರಕ್ಕೆ ಆಗಮಿಸಿದ್ದು ಇನ್ನೂ ಬೆಂಗಳೂರಿನಲ್ಲಿ ನಾಳೆ ಶಿಕ್ಷಕರ ಶಕ್ತಿ ಪ್ರದರ್ಶನ ನಡೆಯಲಿದ್ದು ನಗರಕ್ಕೆ ಧಾರವಾಡ ದಿಂದ ಬಂದಿಳಿದ್ದಾರೆ ಗುರು ತಿಗಡಿ ನೇತೃತ್ವದಲ್ಲಿನ ಕರ್ನಾಟಕ ಶಿಕ್ಷಕರ ಪರಿಷತ್ ನ ಧಾರವಾಡ ಜಿಲ್ಲೆಯ ಟೀಮ್
ಒಟ್ಟಾರೆ ಶಿಕ್ಷಕರ ಜ್ವಲಂತ ಸಮಸ್ಯೆಗಳ ಬಗ್ಗೆ ನಾಳೆ ಏನೋ ಸಭೆ ಕರೆಯಲಾಗಿದ್ದು ಸಭೆ ಕೇವಲ ಹೆಸರಿಗೆ ಆಗದೆ ಅರ್ಥ ಪೂರ್ಣವಾಗಿ ಆಗಲಿ ಎಂಬೊದೆ ನಮ್ಮ ಆಶಯವಾಗಿದೆ.
ವರದಿ – ಗೋಪ್ಯಾ ಸುದ್ದಿ ಸಂತೆ ಡೆಸ್ಕ್ ಬೆಂಗಳೂರು