ಧಾರವಾಡ –
ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಧಾರವಾಡ-71 ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಅಬ್ಬರದ ಪ್ರಚಾರ ವನ್ನು ಮಾಡಲಾಯಿತು. ಪ್ರದೀಪ್ ಶೆಟ್ಟರ್ ಪರ ಧಾರವಾಡ ತಾಲೂಕಿನ ಹಲವು ಗ್ರಾಮದಲ್ಲಿ ಪ್ರಚಾರ ವನ್ನು ಮಾಡಲಾಯಿತು.
ಹೌದು ತಾಲೂಕಿನ ನರೇಂದ್ರ ಕುರಬಗಟ್ಟಿ ಲೋಕೂರ ಕೂಟಬಾಗಿ ಯಾದವಾಡ ಕರಡಿಗುಡ್ಡ ಮರೇವಾಡ ಗ್ರಾಮ ಸೇರಿದಂತೆ ಹಲವೆಡೆ ಪಂಚಾಯತ್ ಅಧ್ಯಕ್ಷರು, ಉಪಾಧ್ಯ ಕ್ಷರ,ಸದಸ್ಯರು ಹಾಗೂ ಸ್ಥಳೀಯ ಮುಖಂಡರೊಂದಿಗೆ ಸಭೆ ನಡೆಸಿ ಪ್ರಥಮ ಪ್ರಾಶ್ಯಸ್ತದ ಮತವನ್ನು ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾದ ಪ್ರದೀಪ ಶೆಟ್ಟರ್ ಅವರಿಗೆ ನೀಡುವದರ ಮೂಲಕ ಅಭಿವೃದ್ಧಿಗೆ ಬೆಂಬಲಿಸ ಬೇಕೆಂದು ವಿನಂತಿಸಿದರು
ಈ ಸಂದರ್ಭದಲ್ಲಿ ಮಾಜಿ ಶಾಸಕಿ ಶ್ರೀಮತಿ ಸೀಮಾ ಅಶೋಕ್ ಮಸೂತಿ,ಸಂಕಲ್ಪ್ ಶೆಟ್ಟರ,ನಾಗೇಶ ಕಲಬುರ್ಗಿ, ಶಂಕರ ಕೋಮಾರದೇಸಾಯಿ,ರುದ್ರಪ್ಪ ಅರಿವಾಳ,ಶಶಿ ಕುಲಕರ್ಣಿ ಹಾಗೂ ಪಕ್ಷದ ಅನೇಕ ಮುಖಂಡರು ಉಪಸ್ಥಿತ ರಿದ್ದರು