ಬೆಂಗಳೂರು –
ಶಿಕ್ಷಕರ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆ ಮಾಡಲು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘಟನೆ ಯ ನೇತೃತ್ವದಲ್ಲಿ ಕರೆಯಲಾಗಿದ್ದ ಸಭೆ ಅಭೂತಪೂರ್ವ ಯಶಸ್ಸು ಕಂಡಿದೆ.
ಹೌದು ರಾಜ್ಯದ ಬೇರೆ ಬೇರೆ ವಲಯಗಳಲ್ಲಿನ ಶಿಕ್ಷಕರ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡು ಷಡಕ್ಷಾರಿ ಅವರು ಈ ಒಂದು ಸಭೆಯನ್ನು ಆಯೋಜನೆ ಮಾಡಿದ್ದರು ಇನ್ನೂ ಸಭೆಯ ಹಿನ್ನೆಲೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಅಪಾರ ಸಂಖ್ಯೆಯಲ್ಲಿ ಶಿಕ್ಷಕ ಬಂಧುಗಳು ಆಗಮಿಸಿ ಷಡಕ್ಷಾರಿ ಅವರಿಗೆ ಬೆಂಬಲವನ್ನು ನೀಡಿದರು
ಇದು ಒಂದು ವಿಚಾರವಾದರೆ ಇನ್ನೂ ಪ್ರಮುಖವಾಗಿ ಈ ಒಂದು ಸಭೆಯಲ್ಲಿ ಷಡಕ್ಷಾರಿ ಅವರು ತಾವು ಪಟ್ಟಿ ಮಾಡಿ ಕೊಂಡು ಬಂದ ಸಮಸ್ಯೆ ಗಳನ್ನು ವೇದಿಕೆಯ ಮೇಲೆ ಪ್ರಸ್ತಾಪ ಮಾಡಿ ಇವುಗಳನ್ನು ಬಿಟ್ಟು ಬೇರೆ ಏನಾದರೂ ಇದ್ದರೆ ಹೇಳಿ ಎಂಬ ಮಾತನ್ನು ಹೇಳಿದರು
ರಾಜ್ಯದ ಮೂಲೆ ಮೂಲೆಗಳಿಂದ ಬಂದಿದ್ದ ಶಿಕ್ಷಕರು ಷಡಕ್ಷಾರಿ ಅವರ ಮುಂದೆ ತಮ್ಮ ಸಮಸ್ಯೆ ಹೇಳಿದರು ಇವೆಲ್ಲವುಗಳನ್ನು ಪಟ್ಟಿ ಮಾಡಿಕೊಂಡು ಅಂತಿಮವಾಗಿ ನಾಳೆ ಶಿಕ್ಷಣ ಸಚಿವರೊಂದಿಗೆ ನಡೆಯಲಿರುವ ಸಭೆಯಲ್ಲಿ ಅವರ ಮುಂದೆ ಇವೆಲ್ಲವುಗಳನ್ನು ಷಡಕ್ಷಾರಿ ಅವರು ಮಂಡನೆ ಮಾಡಲಿದ್ದಾರೆ
ಇಪ್ಪತ್ತಕ್ಕೂ ಹೆಚ್ಚು ರಾಜ್ಯದ ಶಿಕ್ಷಕರ ಪ್ರಮುಖ ಬೇಡಿಕೆಗಳ ಪಟ್ಟಿಯನ್ನು ಈಗಾಗಲೇ ಮಾಡಿ ಸಭೆಯನ್ನು ಅವುಗಳನ್ನು ಓದಿ ನಾಳೆ ಮಂಡನೆಯನ್ನು ಮಾಡಲಿದ್ದಾರೆ. ನಂತರ ಮುಂದಿನ ನಿರ್ಧಾರವನ್ನು ಈಗಾಗಲೇ ತಗೆದುಕೊಂಡಿದ್ದು ಇವತ್ತಿನ ಸಭೆಯಲ್ಲಿ ರಾಜ್ಯದ ಎಲ್ಲಾ ಶಿಕ್ಷಕರ ಸಮಸ್ಯೆ ಗಳನ್ನು ಗಮನ ಹರಿಸಿದ್ದು ನಾಳೆ ಸಚಿವರಿಗೆ ಸಲ್ಲಿಕೆಯಾದ ನಂತರ ಮುಂದಿನ ನಿರ್ಧಾರ ಹೊರ ಬೀಳಲಿದೆ
ಇನ್ನೂ ಈ ಒಂದು ಸಭೆಯಲ್ಲಿ ರಾಜ್ಯದ ಮೂಲೆ ಮೂಲೆ ಗಳಿಂದ ಅಪಾರ ಸಂಖ್ಯೆಯಲ್ಲಿ ಶಿಕ್ಷಕ ಬಂಧುಗಳು ಉತ್ಸಾಹ ದಿಂದ ಪಾಲ್ಗೊಂಡು ಸಭೆಯನ್ನು ಯಶಸ್ವಿಗೊಳಿಸಿದರು
ವರದಿ – ಗೋಪ್ಯಾ ಜೊತೆ ರಶ್ಮಿ ಸುದ್ದಿ ಸಂತೆ ಡೆಸ್ಕ್