ತುಮಕೂರು –
ಶಿಕ್ಷಣ ಸಚಿವ ಮಧು ಬಂಗಾರಪ್ಪ ಕಾರು ಅಪಘಾತ – ಸಚಿವರ ಕಾರಿಗೆ ಡಿಕ್ಕಿಯಾದ ಲಾರಿ ಸ್ವಲ್ಪದರಲ್ಲಿಯೇ ತಪ್ಪಿತು ದೊಡ್ಡ ಅವಘಡ ಹೌದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಚಲಿ ಸುತ್ತಿದ್ದ ಕಾರಿಗೆ ಲಾರಿಯೊಂದು ಡಿಕ್ಕಿಯಾದ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರಿನ ಕ್ಯಾತ್ಸಂದ್ರ ಬಳಿ ಈ ಒಂದು ಅಪಘಾತ ನಡೆದಿದೆ.ಶಿಕ್ಷಣ ಸಚಿವ ಮಧು ಬಂಗಾರಪ್ಪ ಇದ್ದ ಕಾರು ಇದಾಗಿದ್ದು ಲಾರಿಗೆ ಡಿಕ್ಕಿಯಾಗಿದೆ.ಇನ್ನೂ ಸ್ವಲ್ಪದರಲ್ಲಿಯೇ ದೊಡ್ಡ ದೊಂದು ದುರಂತವೊಂದು ತಪ್ಪಿದಂತಾಗಿದ್ದು ತಡರಾತ್ರಿ ನಡೆದಿರುವ ಅಪಘಾತ ಇದಾಗಿದೆ.
ತುಮಕೂರಿನ ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕಾರ್ಯಕ್ರಮ ವೊಂದರಲ್ಲಿ ಪಾಲ್ಗೊಂಡು ಅಲ್ಲಿಂದ ನೇರವಾಗಿ ಬೆಂಗಳೂರು ಕಡೆಗೆ ಸಚಿವರು ತೆರಳುತ್ತಿದ್ದರು.ಈ ವೇಳೆ ಕಾರನ್ನು ಉಜ್ಜಿಕೊಂಡು ಹೋಗಿದ್ದಾರೆ ಲಾರಿ ಚಾಲಕ ಅಪಘಾತದಲ್ಲಿ ಕಾರಿನ ಮುಂಭಾಗ ಸಂಪೂರ್ಣವಾಗಿ ಜಖಂ ಆಗಿದೆ.
ಕಾರಿನಲ್ಲಿದ್ದವರಿಗೆ ಯಾವುದೇ ಗಾಯಗಳಾ ಗಿಲ್ಲ.ಅಪಘಾತದ ಬಳಿಕ ಬೇರೆ ಕಾರಿನಲ್ಲಿ ಸಚಿವ ಮಧು ಬಂಗಾರಪ್ಪ ಅವರು ಬೆಂಗಳೂರಿಗೆ ತೆರಳಿದರು.ಸಧ್ಯ ಈ ಒಂದು ಕುರಿತಂತೆ ಪ್ರಕರ ಣವನ್ನು ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆಯನ್ನು ಮಾಡ್ತಾ ಇದ್ದಾರೆ.
ಸುದ್ದಿ ಸಂತೆ ನ್ಯೂಸ್ ತುಮಕೂರು…..