This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

State News

ನೂತನ BEO ರನ್ನು ಬರಮಾಡಿ ಕೊಂಡ ಶಿಕ್ಷಕ ಬಂಧುಗಳು ಬೀಳ್ಕೊಟ್ಟು ನೂತನ ಬಿಇಓ ಗೆ ಸ್ವಾಗತ…..

WhatsApp Group Join Now
Telegram Group Join Now

ಆನೇಕಲ್

ಆನೇಕಲ್‌ನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಜೆ.ಎಂ. ಜಯಲಕ್ಷ್ಮಿ ಅವರಿಗೆ ಸ್ವಾಗತ ಮತ್ತು ವರ್ಗಾವಣೆಗೊಂಡ ಬಿಇಒ ಪಿ. ನರಸಿಂಹರಾಜು ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಪಟ್ಟಣದ ಗುರು ಭವನದಲ್ಲಿ ನಡೆಯಿತು.

ಇದೇ ವೇಳೆ ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಜಯಲಕ್ಷ್ಮಿ ಮಾತನಾಡಿ ತಾಲ್ಲೂಕಿನ ಶೈಕ್ಷಣಿಕ ಅಭಿವೃದ್ಧಿಯೇ ನನ್ನ ಗುರಿಯಾಗಿದೆ.ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚಿನ ಫಲಿತಾಂಶ ತರುವುದು ಮತ್ತು ಸರ್ಕಾರಿ ಶಾಲೆಗಳ ವಾತಾವ ರಣವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಪಡೆದು ಸರ್ಕಾರಿ ಶಾಲೆಗಳ ಸಬಲೀಕರಣ ಮಾಡುವ ದಿಸೆ ಯಲ್ಲಿ ಕೆಲಸ ಮಾಡಲಾಗುವುದು ಎಂದರು.

ಶಿಕ್ಷಕರ ವೇತನ,ಭತ್ಯೆಗಳು ನಿಗದಿತ ಅವಧಿಯಲ್ಲಿ ದೊರೆ ಯುವಂತೆ ಮಾಡಲಾಗುವುದು.ಆದರೆ ಶಿಕ್ಷಕರು ಶಾಲೆಗಳ ಅಭಿವೃದ್ಧಿಗೆ ಕೆಲಸ ಮಾಡಬೇಕು.ಶಾಲಾ ಅವಧಿಯಲ್ಲಿ ಯಾವುದೇ ವಿನಾಯಿತಿ ನೀಡುವುದಿಲ್ಲ.ಶೈಕ್ಷಣಿಕ ಅಭಿವೃ ದ್ಧಿಗೆ ಶಿಕ್ಷಕರ ಸಂಘಗಳು,ಪೋಷಕರು,ಜನಪ್ರತಿನಿಧಿಗಳು ಬೆಂಬಲ ನೀಡಬೇಕು ಎಂದು ಕೋರಿದರು.

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಶಿವಣ್ಣ ಕಾರ್ಯದರ್ಶಿ ಮಂಜುನಾಥ್,ಖಜಾಂಚಿ ಜಿ. ನಾಗರಾಜು, ಸಂಘಟನಾ ಕಾರ್ಯದರ್ಶಿ ಸುರೇಶ್‌,ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಕಾರ್ಯದರ್ಶಿ ಆನಂದ್‌ಕುಮಾರ್‌, ಪ್ರಾಥ ಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ರಾಜ ಶೇಖರ್‌, ಗಣೇಶ್‌,ಭಾರತಿ, ಖಾಸಗಿ ಶಾಲೆಗಳ ಸಂಘದ ಅಧ್ಯಕ್ಷ ರವಿಕುಮಾರ್‌,ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಗೋಪಾಲ್‌,ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಕಾರ್ಯದರ್ಶಿ ಎ.ಎನ್‌.ನರೇಂದ್ರಕುಮಾರ್,ನಿವೃತ್ತ ಮುಖ್ಯೋಪಾ ಧ್ಯಾಯ ಆರ್. ಮುನಿಯಲ್ಲಪ್ಪ,ಶಿಕ್ಷಣ ಸಂಯೋಜಕ ರಾದ ದತ್ತಗುರು ಹೆಗಡೆ,ನವೀನ್‌, ಸಾಧಿಕ್‌,ಸುರೇಶ್‌,ಬಿಇಒ ಕಚೇರಿಯ ಅಧೀಕ್ಷಕಿ ಸುಧಾಮಣಿ ಹಾಜರಿದ್ದರು.


Google News

 

 

WhatsApp Group Join Now
Telegram Group Join Now
Suddi Sante Desk