ಬೆಂಗಳೂರು –
ಏನೇಲ್ಲಾ ಕಷ್ಟ ಪಟ್ಟು ಇಷ್ಟ ಮಾಡಿಕೊಂಡು ಪ್ರೀತಿ ಮಾಡುತ್ತಿದ್ದ ಯುವತಿಯನ್ನು ಕೊಲೆ ಮಾಡಿ ಕೊನೆಗೆ ತಾನು ಕೂಡಾ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಹೌದು ತಾನು ಪ್ರೀತಿಸುತ್ತಿದ್ದ ಯುವತಿಯನ್ನು ಕೊಲೆ ಮಾಡಿದ ಯುವಕ ನಂತರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೊಸಕೋಟೆ ತಾಲ್ಲೂಕಿನಲ್ಲಿ ನಡೆದಿದೆ.
ಹೊಸಕೋಟೆ ತಾಲ್ಲೂಕಿನ ಲಿಂಗೀರಮಲ್ಲಸಂದ್ರ ಗ್ರಾಮದ ಉಷಾ (24) ಕೊಲೆಯಾದ ಯುವತಿಯಾದರೆ ಇನ್ನೂ. ಗೋಪಾಲಕೃಷ್ಣ ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿ ದ್ದಾನೆ.ಇನ್ನೂ ಸುದ್ದಿ ತಿಳಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಹೆಚ್ಚುವರಿ ಎಸ್ಪಿ ಲಕ್ಷ್ಮಿ ಗಣೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.ಗೋಪಾಲಕೃಷ್ಣ ಹಾಗೂ ಉಷಾ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು.ಇತ್ತೀಚೆಗೆ ಉಷಾ ಮನೆಯವರು ಬೇರೆ ಯುವಕನೊಂದಿಗೆ ಮದುವೆ ನಿಶ್ಚಯ ಮಾಡಿದ್ದ ವಿಷಯ ತಿಳಿದ ಗೋಪಾಲಕೃಷ್ಣ ಕೋಪ ಗೊಂಡಿದ್ದನು.ಯುವತಿ ಮನೆಯಲ್ಲಿ ಯಾರೂ ಇಲ್ಲದಿರುವು ದರಿಂದ ತಿಳಿದುಕೊಂಡು ಆಕೆ ಮನೆಗೆ ಹೋಗಿ ಉಸಿರು ಗಟ್ಟಿಸಿ ಕೊಲೆ ಮಾಡಿದ್ದಾನೆ.ಬಳಿಕ ತಬರಹಳ್ಳಿ ಗ್ರಾಮದ ಕೆರೆ ಬಳಿ ಹೋಗಿ ವಿಷ ಸೇವಿಸಿ ಆತನೂ ಆತ್ಮಹತ್ಯೆಗೆ ಶರಣಾ ಗಿದ್ದಾನೆ. ಈ ಸಂಬಂಧ ಅನುಗೊಂಡನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.