ಹೆಬ್ಬಳ್ಳಿ –
ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ವಾಸುದೇವ ಸೂರಕೋಡ ಇವರ ಆಧಾರ ತಿದ್ದುಪಡಿ ಕೇಂದ್ರವನ್ನು ಧಾರವಾಡ ೭೧ ಮತಕ್ಷೇತ್ರದ ಶಾಸಕ ಅಮೃತ ದೇಸಾಯಿ ಉದ್ಘಾಟಿಸಿದರು
ಉದ್ಘಾಟಿಸಿ ನಂತರ ಮಾತನಾಡಿದ ಶಾಸಕರು ಮೊದಲು ಆಧಾರ ಕಾರ್ಡ ತಿದ್ದುಪಡಿ ಮಾಡಿಸಲು ಹಳ್ಳಿಯ ಜನ ಅದರಲ್ಲೂ ನಮ್ಮ ರೈತರು ಒಂದು ದಿನದ ಕೂಲಿ ನಾಲಿ ಬಿಟ್ಟು ಧಾರವಾಡಕ್ಕೆ ಹೋಗಿ ಇಡೀ ದಿನ ಕಾದು ಆಧಾರ ತಿದ್ದುಪಡಿ ಮಾಡಿಸಬೇಕಾಗಿತ್ತು ಆದರೆ ಈಗ ನಿಮ್ಮ ಊರಿನಲ್ಲಿಯೇ ಆಧಾರ ತಿದ್ದುಪಡಿ ಕೇಂದ್ರವನ್ನು ಸ್ಥಾಪಿಸಿ ಜನರಿಗೆ ಅನುಕೂಲ ಮಾಡಿಕೊಟ್ಡ ವಾಸುದೇವ ಸೂರ ಕೋಡ ಅವರಿಗೆ ಧನ್ಯವಾದಗಳನ್ನು ತಿಳಿಸಿ ಅಭಿನಂದಿಸಿ ದರು
ಇದೇ ಸಂದರ್ಭದಲ್ಲಿ, ಶಾಸಕರಿಗೆ ವಾಸುದೇವ ಸೂರ ಕೋಡ ಅವರ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು ಗ್ರಾಮ ಪಂಚಾಯತಿ ಸದಸ್ಯ ಮಂಜುನಾಥ ವಾಸಂಬಿ, ಮಾಸಾಬಿ ಹಳ್ಳಿಕೇರಿ ಸೃತಿ ನರಗುಂದ,ನಿರ್ಮಲಾ ಹೂಲಿ, ಹಿರಿಯರಾದ ಸಹದೇವ ಹಾವೇರಿ, ಮುದಕಪ್ಪ ಸೂರ ಕೋಡ, ಗ್ರಾಮದ ಸಮಾಜಸೇವಕ ಗಾಣಿಗ ಸಮಾಜದ ಯುವನಾಯಕ ಅಡಿವೆಪ್ಪ ಲಕ್ಕಮ್ಮನವರ ಮುಂತಾದವರು ಇದ್ದರು.