ಬೆಳ್ತಂಗಡಿ –
ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಿಂದಿ ಶಿಕ್ಷಕರಿಗೆ ಹಿಂದಿ ತರಬೇತಿಗಳನ್ನು ನೀಡುವು ದರ ಮುಖಾಂತರ ಶಿಕ್ಷಕರ ಬೋಧನಾ ಸಾಮರ್ಥ್ಯ ಗಳನ್ನು ವೃದ್ಧಿಪಡಿಸಲು ಅಗತ್ಯ ತರಬೇತಿ ಆಯೋ ಜಿಸಬೇಕೆಂದು ಒತ್ತಾಯಿಸಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಪ್ರಾಥಮಿಕ ಹಿಂದಿ ಶಿಕ್ಷಕರ ಸಂಘದ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಇದೇ ವೇಳೆ ಪ್ರಾಥಮಿಕ ಹಿಂದಿ ಶಿಕ್ಷಕರಿಗೆ ಇಂಗ್ಲೀಷ್ ತರಬೇತಿ ನೀಡುವುದನ್ನು ಕೈಬಿಡಬೇಕೆಂದು ಒತ್ತಾಯವನ್ನು ಮಾಡಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಹಿಂದಿ ಶಿಕ್ಷಕರ ಸಂಘದ ತಾಲೂಕಿನ ಅಧ್ಯಕ್ಷರಾದ ಬಳಿರಾಮ ಲಮಾಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ವಾಮಿ. ಹೆಚ್.ಎಸ್ ರವರು ಮತ್ತು ಸಂಘದ ಇತರೆ ಪದಾಧಿ ಕಾರಿಗಳು ಭಾಗವಹಿಸಿದ್ದರು.