ಧಾರವಾಡ –
ಗಣೇಶೋತ್ಸವ ಮೆರವಣಿಗೆ ಹೊರಟವರ ಮೇಲೆ ಧಾರವಾಡ ದಲ್ಲಿ ಪೊಲೀಸರು ಲಾಠಿ ಬೀಸಿದ್ದಾರೆ ಹೌದು ನಗರದ ಹೊಸ ಯಲ್ಲಾಪೂರ ಬಡಾವಣೆ ಯಲ್ಲಿ ಈ ಒಂದು ಘಟನೆ ನಡೆದಿದೆ.ಏಳು ದಿನಗಳ ಗಣೇಶೋತ್ಸವ ಮೆರವಣಿಗೆ ಮಾಡಿಕೊಂಡು ಬರುತ್ತಿದ್ದವರ ಮೇಲೆ ಏಕಾಏಕಿ ಯಾಗಿ ಎಸಿಪಿ ಅನುಷಾ ಅವರು ಲಾಠಿ ಬೀಸಿದ್ದಾರೆ.
ಇನ್ನೂ ಇದನ್ನು ಪ್ರಶ್ನೆ ಮಾಡಲು ಬಂದವರ ಮೇಲೂ ಕೂಡಾ ಲಾಠಿ ಬೀಸಿದ್ದಾರೆ.ಇದರಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 8 ನೇ ವಾರ್ಡ್ ನ ಸದಸ್ಯರಾಗಿರುವ ಶಂಕರ ಶೇಳಕೆ ಅವರಿಗೂ ಬಡಿದಿದೆ.
ಏಕಾಏಕಿ ಯಾಗಿ ಪೋಲೀಸರು ಲಾಠಿ ಬೀಸುತ್ತಿ ದ್ದಂತೆ ಇತ್ತ ಸಿಡಿದೆದ್ದ ಎಲ್ಲರೂ ಪ್ರತಿಭಟನೆ ಮಾಡಿ ದರು.ತಡರಾತ್ರಿ ವರೆಗೂ ಪ್ರತಿಭಟನೆ ಮಾಡಿದರು. ಯಾರೇ ಏನೇ ಹೇಳಿದರು ಕೂಡಾ ಒಪ್ಪದೇ ನಡು ರಸ್ತೆಯಲ್ಲಿ ಕುಳಿತುಕೊಂಡು ಹೋರಾಟ ಮಾಡಿದರು
ಏನು ತಪ್ಪು ಮಾಡದಿದ್ದರೂ ಕೂಡಾ ಪೊಲೀಸರು ಯಾಕೇ ಹೀಗೆ ಮಾಡಿದರು ಲಾಠಿ ಬೀಸಿದ್ದಾದರೂ ಯಾಕೇ ಇಂತಹ ಉತ್ತರವಿಲ್ಲದ ಪ್ರಶ್ನೆ ಗಳಿಗೆ ಪೊಲೀಸರ ವಿರುದ್ಧ ನಾಳೆ ಬಿಜೆಪಿ ಪಕ್ಷದ ಸ್ಥಳೀಯ ಮುಖಂಡರು ಕಾರ್ಯಕರ್ತರು ಹೋರಾಟ ಮಾಡಲು ನಿರ್ಧಾರವನ್ನು ಕೈಗೊಂಡಿದ್ದಾರೆ