ಹುಬ್ಬಳ್ಳಿ –
ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ರಾಜ್ಯಕ್ಕೆ ಆಗಮಿಸಿದ್ದು ಧಾರವಾಡ ಮತ್ತು ಹುಬ್ಬಳ್ಳಿಯಲ್ಲಿ ನಡೆಯಲಿರುವ ಎರಡು ಕಾರ್ಯಕ್ರಮಗಳಲ್ಲಿ ಇವರು ಪಾಲ್ಗೊಳ್ಳಲಿದ್ದು ಹುಬ್ಬಳ್ಳಿಯ ಜಮಾಖಾನ ಕ್ಲಬ್ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಗೆ ವೇದಿಕೆಯಲ್ಲಿ ಅವಕಾಶ ವನ್ನು ನೀಡಲಾಗಿರಲಿಲ್ಲ ಹೀಗಾಗಿ ಈ ಒಂದು ವಿಚಾರ ಕುರಿತಂತೆ ಸಾಕಷ್ಟು ಅಸಮಾಧಾನ ಕೇಳಿ ಬಂದಿತ್ತು ಇದನ್ನು ಗಂಭೀರವಾಗಿ ಪರಿಗಣಿಸಿ ಕೊನೆಗೂ ಜಗದೀಶ್ ಶೆಟ್ಟರ್ಗೆ ವೇದಿಕೆಯಲ್ಲಿ ಕುಳಿತುಕೊಳ್ಳಲು ಅವಕಾಶವನ್ನು ನೀಡಲಾಗಿದೆ
ಈ ಮೂಲಕ ಭಾಗ್ಯವನ್ನು ಕಲ್ಪಿಸಲಾಗಿದೆ.ತೀವ್ರ ಅಸಮಾಧಾನ ಭುಗಿಲೆದ್ದ ಹಿನ್ನೆಲೆಯಲ್ಲಿ ವೇದಿಕೆಯ ಮೇಲೆ ಮಾಜಿ ಮುಖ್ಯ ಮಂತ್ರಿ ಜಗದೀಶ್ ಶೆಟ್ಟರ್ಗೆ ಅವಕಾಶ ನೀಡಲಾಗಿದೆ.ಮಾಜಿ ಸಿಎಮ್ ಜಗದೀಶ್ ಶೆಟ್ಟರ್ನ್ನ ಕೈಬಿಟ್ಟಿದ್ದರು ಆಯೋಜಕರು
ಹುಬ್ಬಳ್ಳಿಯ ಜಿಮ್ಖಾನ್ ಮೈದಾನದಲ್ಲಿ ನಡೆಯುತ್ತಿರುವ ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಇದು ಕಂಡು ಬಂದಿತ್ತು.ಈ ಕಾರ್ಯಕ್ರಮದಲ್ಲಿ ಜಗದೀಶ್ ಶೆಟ್ಟರ್ನ್ನ ಕಡೆಗಣನೆ ಮಾಡ ಲಾಗಿತ್ತು ಇದಕ್ಕೆ ಶೆಟ್ಟರ್ ಬಣದಿಂದ ತೀವ್ರ ಅತೃಪ್ತಿ ವ್ಯಕ್ತವಾಗಿತ್ತು ಇದರಿಂದಾಗಿ ರಾತ್ರೋರಾತ್ರಿ ಬದಲಾಗಿದೆ ಗಣ್ಯರ ಪಟ್ಟಿ.ಕೊನೆ ಕ್ಷಣದಲ್ಲಿ ವೇದಿಕೆಯ ಮೇಲೆ ಜಗದೀಶ್ ಶೆಟ್ಟರ್ಗೆ ಅವಕಾಶವನ್ನು ನೀಡಲಾಗಿತ್ತು.ಈ ಮೂಲಕ ಶೆಟ್ಟರ್ಗೆ ಅತೃಪ್ತಿ ಶಮನಗೊಳಿಸುವ ಯತ್ನವನ್ನು ಮಾಡಲಾಗಿದೆ ಎಂಬ ಮಾತು ಗಳು ಕೇಳಿ ಬಂದಿದ್ದು ಏನೇನಾಗುತ್ತದೆ ಎಂಬೊದನ್ನು ಕಾದು ನೋಡಬೇಕಿದೆ.ಇನ್ನೂ ರಾಷ್ಟ್ಪಪತಿ ಅವರೊಂದಿಗೆ ವೇದಿಕೆಯ ಮೇಲೆ ಕುಳಿತುಕೊಳ್ಳಲು ಒಟ್ಟು 13 ಗಣ್ಯರಿಗೆ ಅವಕಾಶವನ್ನು ನೀಡಲಾಗಿದೆ.