ಬೆಂಗಳೂರು –
ಸಾರ್ವಜನಿಕ ಶಿಕ್ಷಣ ಇಲಾಖೆ ಗೆ ನೂತನ ಆಯುಕ್ತ ರಾಗಿ ಡಾ ವಿಶಾಲ್ ಆರ್ ವರ್ಗಾವಣೆ ಆಗಿದ್ದಾರೆ. ಇಲಾಖೆಗೆ ವರ್ಗಾವಣೆ ಗೊಂಡ ನೂತನ ಆಯುಕ್ತ ರಿಗೆ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿ ಯ ಸಂಘದವರು ಕೂಡಾ ಸ್ವಾಗತ ಕೊರಿದ್ದಾರೆ.
ರಾಜ್ಯ ಘಟಕದ ಶಿಕ್ಷಕಿಯರ ಸಂಘದ ಸರ್ವ ಸದಸ್ಯರ ಪರವಾಗಿ ಸಂಘದ ಸಂಸ್ಥಾಪಕ ಅಧ್ಯಕ್ಷ ರಾದ ಡಾ ಲತಾ ಎಸ್ ಮುಳ್ಳೂರ ಪ್ರಧಾನ ಕಾರ್ಯದರ್ಶಿ ಜ್ಯೋತಿ ಹೆಚ್ ಸೇರಿದಂತೆ ಹಲವರು ನೂತನ ಆಯುಕ್ತರಿಗೆ ಸ್ವಾಗತ ಕೊರಿದ್ದಾರೆ. ಜೊತೆಗೆ ನಿಮ್ಮಿಂದಾದರೂ ಸಧ್ಯ ರಾಜ್ಯದಲ್ಲಿ ಶಿಕ್ಷಕರು ಅನುಭವಿಸುತ್ತಿರುವ ಶಿಕ್ಷಕರ ಸಮಸ್ಯೆ ಗಳಿಗೆ ಶಾಶ್ವತ ಪರಿಹಾರ ಸಿಗಲಿ ಅದರ ನಿರೀಕ್ಷೆಯಲ್ಲಿ ನಾವಿದ್ದೇವೆ ಎಂದಿದ್ದಾರೆ.