ಧಾರವಾಡ –
ಧಾರವಾಡದ ಕವಲಗೇರಿ ಗ್ರಾಮದ ಹಾಗೂ ಸುತ್ತ ಮುತ್ತಲೂ ಚಿರತೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಈ ಕೂಡಲೇ ಧಾರವಾಡ ತಾಲ್ಲೂಕಿನ ಕವಲಗೇರಿ ಗ್ರಾಮ ಮತ್ತು ಸುತ್ತಮುತ್ತಲಿನ ಶಾಲೆಗಳಿಗೆ ರಜೆ ಯನ್ನು ನೀಡುವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಧಾರವಾಡ ತಾಲ್ಲೂಕು ಘಟಕ ದವರು ಒತ್ತಾಯವನ್ನು ಮಾಡಿದ್ದಾರೆ.
ಗ್ರಾಮದಲ್ಲಿ ಹಾಗೂ ಸುತ್ತ ಮುತ್ತಲೂ ಚಿರತೆ ಕಾಣಿಸಿ ಕೊಂಡಿದ್ದು ಹೀಗಾಗಿ ಮಕ್ಕಳ ಸುರಕ್ಷತೆಯಿಂದಾಗಿ ಈ ಕೂಡಲೇ ಶಾಲೆಗಳಿಗೆ ರಜೆಯನ್ನು ನೀಡುವಂತೆ ತಾಲ್ಲೂಕು ಘಟಕದ ಅಧ್ಯಕ್ಷ ಅಜೀತಕುಮಾರ ದೇಸಾಯಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಗಳಿಗೆ ಮನವಿ ನೀಡಿ ಒತ್ತಾಯವನ್ನು ಮಾಡಿದರು.
ಇದೇ ವೇಳೆ ಕೋವಿಡ್ ಸಮಯದಲ್ಲಿ ಕರ್ತವ್ಯವನ್ನು ಮಾಡಿದ ಶಿಕ್ಷಕರಿಗೆ ಗಳಿಕೆ ರಜೆಯನ್ನು ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ನೀಡಿ ಸಂಘದ ತಾಲ್ಲೂಕು ಘಟಕದ ಸರ್ವ ಸದಸ್ಯರು ಒತ್ತಾಯ ವನ್ನು ಮಾಡಿದರು.
ಈ ಒಂದು ಸಂದರ್ಭದಲ್ಲಿ ರಾಜಶೇಖರ ಹೊನ್ನಪ್ಪ ನವರ,ಎಸ್ ಸಿ ಕೇಸರಿ,ಆರ್ ಬಿ ಮುನವಳ್ಳಿ,ಬಿ ಎಸ್ ಪಾಟೀಲ,ಶ್ರೀಮತಿ ಭಾರತಿ ಮನ್ನಿಕೇರಿ, ಸೇರಿದಂತೆ ಹಲವರು ಈ ಒಂದು ಸಮಯದಲ್ಲಿ ಉಪಸ್ಥಿತರಿದ್ದರು.