ವಿಜಯಪುರ –
ವಿಜಯಪೂರ ನೌಕರರ ಸಂಘದಲ್ಲಿ ಭಾರಿ ಪ್ರಮಾಣದಲ್ಲಿ ಬ್ರಷ್ಪಾಚಾರ ನಡೆದಿದ್ದು ಈ ಒಂದು ಕುರಿತು ಸೂಕ್ತವಾದ ತನಿಖೆ ಯನ್ನು ಮಾಡುವಂತೆ ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷಾರಿ ಅವರಿಗೆ ಮನವಿ ನೀಡಲಾಯಿತು.ವಿಜಯಪುರ ಜಿಲ್ಲಾ ಸರಕಾರಿ ನೌಕರರ ಸಂಘದಲ್ಲಿ ನಡೆದಿರುವ ಭಾರಿ ಅವ್ಯವಹಾರವನ್ನು ಸಮಗ್ರ ವಾಗಿ ತನಿಖೆ ನಡೆಸಿ ತಪ್ಪಿಸ್ಥರ ಮೇಲೆ ಶಿಸ್ತು ಕ್ರಮ ವನ್ನು ಕೈಗೊಳ್ಳುವಂತೆ ಆಗ್ರಹ ಮಾಡಲಾಯಿತು.
ಹೌದು ಸಂಘದ ರಾಜ್ಶಾಧ್ಶಕ್ಷರಾದ ಷಡಕ್ಷರಿ ಅವರಿಗೆ ಮನವಿ ಸಲ್ಲಿಸಲಾಯಿತು.ರಾಜ್ಶ ಸಂಘದ ವಂತಿಗೆಯ ಪಾಲನ್ನು ಹೊರತುಪಡಿಸಿ ವಿಜಯಪುರ ಜಿಲ್ಲಾ ಸಂಘಕ್ಕೆ ವಾರ್ಷಿಕ ಸುಮಾರು 34 ಲಕ್ಷ ಆದಾಯವಿದೆ.ಕಳೆದು ಹನ್ನೆ ರಡು ವರ್ಷಗಳಿಂದ ಸರ್ಕಾರಿ ನೌಕರರ ಸಂಘದ ಮಹಾ ಸಭೆಯನ್ನು ಮಾಡಿರುವದಿಲ್ಲ.ಜಿಲ್ಲಾ ಸಂಘಕ್ಕೆ ಸಂಘದ ಅಂಗಡಿಗಳ ಬಾಡಿಗೆಯಿಂದಲೆ ಒಂದು ತಿಂಗಳಿಗೆ ರೂ 1 ಲಕ್ಷ 11 ಸಾವಿರ ಸಂಗ್ರಹವಾಗಿ ವಾರ್ಷಿಕ ರೂ 13 ಲಕ್ಷ 32 ಸಾವಿರ ಸಂಗ್ರಹವಾಗುತ್ತಿದೆ ಹೀಗಾಗಿ ಇದರ ಲೆಕ್ಕಪತ್ರವನ್ನು ಕಾರ್ಯಕಾರಿ ಸಮಿತಿಗೂ ಯಾರಿಗೂ ನೀಡದೇ ಕೋಟ್ಶಾಂ ತರ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆಂದರು
ಬಾಗಲಕೋಟೆಗೆ ಆಗಮಿಸಿದ ರಾಜ್ಯಾಧ್ಯಕ್ಷರಾದ ಸಿ ಎಸ್ ಷಡಕ್ಷರಿ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.ತಕ್ಷಣ ತನಿಖೆ ಕೈಗೊಂಡು ಕ್ರಮ ಕೈಗೋಳ್ಳುವದಾಗಿ ರಾಜ್ಶಾಧ್ಶಕ್ಷರು ನಿಯೋಗಕ್ಕೆ ತಿಳಿಸಿದರು.ಮಾನ್ಯ ನೌಕರ ಸಂಘದ ರಾಜ್ಯಧ್ಯ ಕ್ಷರಲ್ಲಿ ಮುಖ್ಯವಾದ ವಿನಂತಿ ಏನೆಂದರೆ ಇದೆ ರೀತಿ ನಮ್ಮ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದಲ್ಲಿನೂ ಕೂಡ ಕೋಟಿಗಟ್ಟಲೆ ಕಳ್ಳ ಲೆಕ್ಕ ಬರೆದು ಸುಳ್ಳು ಪತ್ರ ಇಟ್ಟಿದ್ದಾರೆ ಅದನ್ನು ಕೂಡ ಸ್ವಲ್ಪ ತನಿಖೆ ಮಾಡಿಸಿ ಶಿಕ್ಷಕರ ಪಾಲಿನ ವಂತಿಗೆ ಹಣ ಉಳಿಸುವಂತೆ ಆಗ್ರಹ ವನ್ನು ಮಾಡಿದರು
ಈ ಒಂದು ನಿಯೋಗದಲ್ಲಿ ಅರ್ಜುನ ಲಮಾಣಿ,ಹಣಮಂತ ಕೊಣದಿ,ಬಿ ಎ ಬಿರಾದಾರ(JCB ಗೌಡ್ರು)ವಿ ಎಸ್ ಕಳಸ ಗೊಂಡ,ಅಲ್ಲಾಬಕ್ಷ ವಾಲಿಕಾರ,ಆರ್ ಆಯ್ ನಧಾಪ್ (ಅಧ್ಯಕ್ಷರು ಸರಕಾರಿ ನೌಕರರ ಸಂಘ ನಿಡಗುಂದಿ)ಎಮ್ ಆರ್ ಮಕಾಂದಾರ (ಅಧ್ಯಕ್ಷರು ಉರ್ದು ಸರಕಾರಿ ನೌಕರರ ಸಂಘ ನಿಡಗುಂದಿ)ಬಿ ಸಿ ನದಾಪ್,ಸಿ ಟಿ ಜಿತ್ತಿ,ಅಶೋಕ ಚನಬಸುಗೊಳ,ಆರ್ ಎಮ್ ಮೇತ್ರಿ,ವಿ ಜಿ ದೇಸಾಯಿ
ರಾಜು ಜಾಧವ,ರೇವಪ್ಪ ಮಸಳಿ,ಎಮ್ ಎನ್ ನಾಯಕ
ಅಶೋಕ ಬಜಂತ್ರಿ,ಸಿದರಾಯ ಅಥಣಿ,ಮಹಾತೇಶ ಕದ್ದಿ, ವೆಂಕಟೇಶ ಕಪಟಕರ,ಸುಧೀರ ಹಲ್ಯಾಳ,ಅಶೋಕ ಬೂದಿಹಾಳ,ಎಮ್ ಎಸ್ ಟಕ್ಕಳಕಿ ಸೇರಿದಂತೆ ಹಲವರು ಈ ಒಂದು ಸಮಯದಲ್ಲಿ ಉಪಸ್ಥಿತರಿದ್ದರು