ತುಮಕೂರು –
ರಾಜ್ಯದ ಶಾಲೆಗಳಲ್ಲಿನ ಬಿಸಿಯೂಟದಲ್ಲಿ ಕಳಪೆ ಆಹಾರ ಪದಾರ್ಥಗಳ ಕುರಿತಂತೆ ದೂರುಗಳು ಬಂದಿವೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದರು.ತುಮಕೂರಿನಲ್ಲಿ ಮಾತನಾಡಿದ ಅವರು ರಾಜ್ಯದ ಹಲವು ಶಾಲೆಗಳಲ್ಲಿ ಮಕ್ಕಳ ಬಿಸಿಯೂಟಕ್ಕೆ ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ವಿತರಣೆ ಮಾಡುವ ಕುರಿತಂತೆ ನನಗೆ ಹಲವು ದೂರುಗಳನ್ನು ನೀಡಿದ್ದಾರೆ ಈ ಕುರಿತಂತೆ ಈಗಾಗಲೇ ಅಧಿಕಾರಿಗಳಿಗೆ ಪರಿಶೀಲನೆ ಮಾಡುವಂತೆ ಸೂಚನೆ ನೀಡಿದ್ದು ವರದಿಯನ್ನು ನೀಡುವಂತೆ ಹೇಳಿದ್ದೇನೆ ಎಂದರು.
ಇನ್ನೂ ಬಿಸಿಯೂಟ ಯೋಜನೆಗಳಡಿ ಕಳಪೆ ಆಹಾರ ಪದಾರ್ಥಗಳ ಕುರಿತು ದೂರು ಬಂದಿರುವುದನ್ನು ಗಂಭೀರ ವಾಗಿ ತಗೆದುಕೊಂಡಿದ್ದೇನೆ ಕೇವಲ ಮೂರು ಶಾಲೆಗಳಲ್ಲಿ ಮಾತ್ರ ಅಂತಾ ದೂರನ್ನು ನೀಡಿದ್ದು ಕಂಡು ಬಂದಿದ್ದು ಇದನ್ನು ಇಲಾಖೆ ಹಾಗೇ ನಾನು ಕೂಡಾ ಗಂಭೀರವಾಗಿ ತಗೆದುಕೊಂಡಿದ್ದು ವರದಿ ಬಂದ ಕೂಡಲೇ ತಕ್ಷಣ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.