ಕಲಘಟಗಿ –
ಕ್ಷೇತ್ರದಲ್ಲಿ ಬೆಂಕಿಗಾಹುತಿಯಾದ ಬೇಕರಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ ಸಚಿವ ಸಂತೋಷ ಲಾಡ್ – ಬೇಕರಿ ಮಾಲಿಕರಿಗೆ ಸಾಂತ್ವನ ಹೇಳಿ ಮುನ್ನಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ ಸಚಿವರು.
ಬಿಡುವಿಲ್ಲದ ಕೆಲಸ ಕಾರ್ಯಗಳ ನಡುವೆ ಕಾರ್ಮಿಕ ಸಚಿವ ಸಂತೋಷ ಲಾಡ್ ಕ್ಷೇತ್ರದಲ್ಲಿನ ಸಮಸ್ಯೆಯೊಂದಕ್ಕೆ ಸ್ಪಂದಿಸಿದ್ದಾರೆ.ಹೌದು ಸದಾ ಬಿಡುವಿಲ್ಲದ ರಾಜಕೀಯ ಕೆಲಸಗಳ ನಡುವೆ ಕ್ಷೇತ್ರದಲ್ಲಿನ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿಗೆ ಆಹುತಿಯಾದ ಬೇಕರಿಯೊಂದಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದರು.ಹೌದು ಇತ್ತೀಚಿಗಷ್ಟೇ ಶಾರ್ಟ್ ಸರ್ಕಿಟ್ ನಿಂದ ಬೆಂಕಿಗಾಹುತಿಯಾದ ಕಲಘಟಗಿ ತಾಲೂಕಿನ ಜೋಡಳ್ಳಿ ಗ್ರಾಮದ ಗೋಲ್ಡನ್ ಬೇಕರಿ ಮಳಿಗೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬೆಂಕಿಗೆ ಆಹುತಿಯಾಗಿ ಸುಟ್ಟು ಕರಕಲಾದ ಬೇಕರಿಯನ್ನು ವೀಕ್ಷಣೆ ಮಾಡಿದ ಸಚಿವರು ಅಂಗಡಿ ಮಾಲೀಕರೊಂದಿಗೆ ಮಾತನಾಡಿ ಸಮಸ್ಯೆ ಕುರಿತಂತೆ ಸಂಪೂರ್ಣವಾದ ಮಾಹಿತಿ ಯನ್ನು ಪಡೆದುಕೊಂಡರು.ಇದೇ ವೇಳೆ ಕುಟುಂಬ ದವರಿಗೆ ಧೈರ್ಯ ತುಂಬಿ ಮುಂದೆ ಇಂತಹ ಅವಘಡಗಳಾಗದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದರು.
ಇನ್ನೂ ಬಿಡುವಿಲ್ಲದ ಕೆಲಸದ ನಡುವೆಯೂ ಕ್ಷೇತ್ರದಲ್ಲಿನ ಪುಟ್ಟ ಗ್ರಾಮದಲ್ಲಿನ ಈ ಒಂದು ಸಮಸ್ಯೆಗೆ ಸಚಿವರು ಸ್ಪಂದಿಸಿ ತಾವೊಬ್ಬರು ಸಾಮಾನ್ಯ ಸಚಿವರು ಎಂಬೊದನ್ನು ಈ ಮೂಲಕ ತೋರಿಸಿಕೊಟ್ಟರು.
ಸುದ್ದಿ ಸಂತೆ ನ್ಯೂಸ್ ಕಲಘಟಗಿ…..