ಆನೇಕಲ್ -
ಪಟಾಕಿ ದುರಂತಕ್ಕೆ ಕಂಬನಿ ಮಿಡಿದ ಸಚಿವ ಸಂತೋಷ ಲಾಡ್ – ಘಟನೆ ಕುರಿತಂತೆ ವರದಿ ನೀಡಲು ಸೂಚನೆ ನೀಡಿ ಅವಶ್ಯಕ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ ಸಚಿವರು
ಬೆಂಗಳೂರಿನ ಆನೇಕಲ್ಲ್ ನಲ್ಲಿ ನಡೆದ ಪಟಾಕಿ ದುರಂತ ವಿಚಾರ ಕುರಿತಂತೆ ಕಾರ್ಮಿಕ ಸಚಿವ ಘಟನೆ ಕುರಿತಂತೆ ವರದಿಯನ್ನು ನೀಡಲು ಅಧಿ ಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ.ಹೌದು ಆನೇಕಲ್ ತಾಲೂಕಿನ ಅತ್ತಿಬೆಲೆ ಬಳಿಯ ಪಟಾಕಿ ಸಂಗ್ರಹ ಮಳಿಗೆಯಲ್ಲಿ ಸಂಭವಿಸಿರುವ ಅಗ್ನಿ ಅನಾಹುತದಲ್ಲಿ ಕಾರ್ಮಿಕರು ಸೇರಿದಂತೆ 13 ಜನರು ಮೃತಪಟ್ಟಿದ್ದಾರೆ.
ಈ ಒಂದು ವಿಷಯ ಕುರಿತು ಕಾರ್ಮಿಕ ಸಚಿವ ಸಂತೋಷ ಲಾಡ್ ತೀವ್ರ ಬೇಸರವನ್ನು ವ್ಯಕ್ತಪ ಡಿಸಿ ಈ ಒಂದು ಘಟನೆ ದುಃಖ ತರಿಸಿದೆ ಎಂದಿದ್ದಾ ರೆ.ಈಗಾಗಲೇ ಅಗತ್ಯ ತುರ್ತು ಸೇವೆಗಳನ್ನು ಕಳು ಹಿಸಿ ಕೊಡಲಾಗಿದೆ.ದುರ್ಘಟನೆ ಬಗ್ಗೆ ಸಂಬಂಧಿ ಸಿದ ಅಧಿಕಾರಿಗಳಿಂದ ವರದಿ ನೀಡುವಂತೆ ಹಾಗೂ ಅವಶ್ಯಕ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದೇನೆ ಎಂದಿದ್ದಾರೆ.
ಹಾಗೆಯೇ ಸರ್ಕಾರದಿಂದ ನೀಡಬಹುದಾದ ಪರಿಹಾರದ ಬಗ್ಗೆ ಮುಖ್ಯಮಂತ್ರಿಯವರೊಂದಿಗೆ ಅವರ ಜೊತೆ ಚರ್ಚಿಸಲಿದ್ದೇನೆ ಎಂದು ಹೇಳಿ ಮೃತರ ಕುಟುಂಬಗಳಿಗೆ ಸಂತಾಪವನ್ನು ಸೂಚಿಸಿ ದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..