This is the title of the web page
This is the title of the web page

Live Stream

September 2023
T F S S M T W
 123456
78910111213
14151617181920
21222324252627
282930  

| Latest Version 8.0.1 |

ಬೆಂಗಳೂರು ನಗರ

ಕ್ಷೇತ್ರದ ಸಮಸ್ಯೆಗಳ ಕುರಿತು ಧ್ವನಿ ಎತ್ತಿದ ಶಾಸಕ M R ಪಾಟೀಲ್ – ಕುಂದಗೋಳ ತಾಲೂಕನ್ನು ಬರಗಾಲ ಪೀಡಿತ ಎಂದು ಘೋಷಣೆ ಮಾಡಿ ಆಗ್ರಹ…..


ಬೆಂಗಳೂರು

ಕುಂದಗೋಳ ತಾಲೂಕನ್ನು ಬರಗಾಲ ಎಂದು ಘೋಷಿಸಿ,ಹೆಚ್ಚಿನ ಅನುದಾನವನ್ನು ನೀಡಿ ಎಂದು ಕುಂದಗೋಳ ವಿಧಾನ ಸಭಾ ಕ್ಷೇತ್ರದ ಶಾಸಕ ಎಮ್ ಆರ್ ಪಾಟೀಲ ಆಗ್ರಹ ಮಾಡಿದ್ದಾರೆ ಸದನದಲ್ಲಿ ಮಾತನಾಡಿದ ಅವರು ಈ ಒಂದು ಒತ್ತಾಯ ಮಾಡಿದರು

ಕುಂದಗೋಳ ತಾಲೂಕಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.ಈ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದ್ದು ಕ್ಷೇತ್ರಕ್ಕೆ ಹೆಚ್ಚಿನ ಅನು ದಾನ ನೀಡಬೇಕೆಂದು ಕುಂದಗೋಳ ವಿಧಾನ ಸಭಾ ಮತಕ್ಷೇತ್ರದ ಶಾಸಕಎಮ್.ಆರ್.ಪಾಟೀಲ್ ಅವರು ಸರ್ಕಾರಕ್ಕೆ ಒತ್ತಾಯಿಸಿದರು.

ವಿಧಾನಸೌಧದಲ್ಲಿ ಎರಡನೇ ಬಾರಿಗೆ ಕ್ಷೇತ್ರದ ಜನರ ಧ್ವನಿಯಾಗಿ ಮಾತನಾಡಿದ ಅವರು ಕುಂದಗೋಳ ಕ್ಷೇತ್ರದಲ್ಲಿ 20-25 ಕಿ.ಮೀ ಬೆಣ್ಣೆ ಹಳ್ಳ ಹಾದು ಹೋಗುತ್ತದೆ. ಇದರಿಂದಾಗಿ ಸರಿಸುಮಾರು 2-3 ಸಾವಿರ ಎಕರೆ ಭೂಮಿಗೆ ಹಾನಿಯಾಗುತ್ತಿದೆ.ಇದರಿಂದಾಗಿ ಬೆಣ್ಣಿ ಹಳ್ಳವನ್ನು ಹೂಳೆತ್ತುವ ಕಾರ್ಯ ಆಗಬೇಕಿದೆ.ಇಲ್ಲದೇ ಹೋದರೆ ಪ್ರತಿವರ್ಷ ಕ್ಷೇತ್ರದ ಜನರು ಪ್ರವಾಹ ಎದುರಿಸಬೇಕಿದೆ ಎಂದರು.

ಪೋಡಿ ಮುಕ್ತ ಗ್ರಾಮ ಆರಂಭಿಸಬೇಕು ಈ ಹಿಂದೆ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ರಾಜ್ಯದಲ್ಲಿ ಪೋಡಿಮುಕ್ತ ಗ್ರಾಮ ಯೋಜನೆ ಜಾರಿಗೊಳಿಸ ಲಾಯಿತು ಈಗ ಅದನ್ನು ನಿಲ್ಲಿಸಲಾಗಿದೆ ಇದರಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಸಮಸ್ಯೆ ಯಾಗಿದ್ದು ಆರಂಭ ಮಾಡುವಂತೆ ಆಗ್ರಹಿಸಿದರು

ಇದರಲ್ಲಿ ಎಲ್ಲ ಹೀಸಾಗಳನ್ನು ಒಂದುಗೂಡಿಸಿ ಪ್ರಮಾಣಪತ್ರ ಕೊಡುವುದು ಇತ್ತು. ಈ ಯೋಜನೆಗೆ ಸಂಬಂಧಿಸಿದಂತೆ ಆಫ್’ಲೈನ್ ಆರ್ಜಿ ಕೊಡಲು ಅವಕಾಶ ಇತ್ತು. ಆದರೆ ಈ ಯೋಜನೆಯನ್ನು 30-06-2023 ಕ್ಕೆ ರಾಜ್ಯ ಸರ್ಕಾರ ನಿಲ್ಲಿಸಿದೆ.

 

ಇದರಿಂದ ಸಾಕಷ್ಟು ಜನರು ಪೋಡಿ ಮಾಡಿ ಕೊಳ್ಳಲು ಸಮಸ್ಯೆ ಅನುಭವಿಸುತ್ತಿದ್ದಾರೆ.ಈ ಹಿನ್ನೆಲೆಯಲ್ಲಿ ಯೋಜನೆಯನ್ನು ಪುನರ್ ಆರಂಭ ಮಾಡಬೇಕು ಎಂದು ಒತ್ತಡ ಹೇರಿದರು.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..


Google News Join The Telegram Join The WhatsApp

 

 

Suddi Sante Desk

Leave a Reply