This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State Newsಧಾರವಾಡ

ಕಡಲೆ ಬೀಜ ವಿತರಣೆ ಮಾಡಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಕ್ಷೇತ್ರದ ರೈತರಿಗೆ ನೇರವಾದ ಶಾಸಕ ಎನ್ ಹೆಚ್ ಕೋನರೆಡ್ಡಿ – ಹಿಂಗಾರಿನ ಬಿತ್ತನೆ ಕಾರ್ಯಕ್ಕೆ ನೆರವಾಗಲು ಕ್ಷೇತ್ರದ ರೈತರಿಗೆ ಖರೀದಿ ಕೇಂದ್ರ ಆರಂಭ ಮಾಡಿದ ಜನನಾಯಕ…..

WhatsApp Group Join Now
Telegram Group Join Now

ನವಲಗುಂದ

ಕಡಲೆ ಬೀಜ ವಿತರಣೆ ಮಾಡಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಕ್ಷೇತ್ರದ ರೈತರಿಗೆ ನೇರವಾದ ಶಾಸಕ ಎನ್ ಹೆಚ್ ಕೋನರೆಡ್ಡಿ – ಹಿಂಗಾರಿನ ಬಿತ್ತನೆ ಕಾರ್ಯಕ್ಕೆ ನೆರವಾಗಲು ಕ್ಷೇತ್ರದ ರೈತರಿಗೆ ಖರೀದಿ ಕೇಂದ್ರ ಆರಂಭ ಮಾಡಿದ ಜನನಾಯಕ

ಹೌದು ಈಗಾಗಲೇ ಮುಂಗಾರು ಹಂಗಾಮಿನಲ್ಲಿ ಮಳೆಯಿಲ್ಲದೇ ಸಂಕಷ್ಟದಲ್ಲಿದ್ದ ರೈತರಿಗೆ ಹಿಂಗಾರಿನ ಹಂಗಾಮಿನಲ್ಲಾದರೂ ನೆರವಾಗಲಿ ಎಂಬ ಕಾರಣಕ್ಕಾಗಿ ಶಾಸಕ ಎನ್ ಹೆಚ್ ಕೋನರೆಡ್ಡಿ ಯವರು ಕ್ಷೇತ್ರದಲ್ಲಿ ಕಡಲೆ ಬೀಜ ಖರೀದಿ ಕೇಂದ್ರವನ್ನು ಆರಂಭ ಮಾಡಿದ್ದಾರೆ.

ಧಾರವಾಡ ಜಿಲ್ಲೆಯ ನವಲಗುಂದ ವಿಧಾನಸಭಾ ಕ್ಷೇತ್ರದ ರೈತರಿಗೆ ಅನುಕೂಲವಾಗಲಿ ಎಂಬ ಕಾರಣದಿಂದಾಗಿ ರೈತರಿಗೆ ಕಡಲೆ ಬೀಜವನ್ನು ವಿತರಣೆ ಮಾಡುವ ಮೂಲಕ ವಿಶೇಷವಾಗಿ ಕ್ಷೇತ್ರದಲ್ಲಿ ಕಡಲೆ ಬೀಜ ಕೇಂದ್ರವನ್ನು ಶಾಸಕರು ಉದ್ಘಾಟನೆ ಮಾಡಿ ರೈತರಿಗೆ ಅನುಕೂಲವನ್ನು ಕಲ್ಪಿಸಿದರು.ನವಲಗುಂದ ವಿಧಾನಸಭಾ ಮತ್ತು ಕ್ಷೇತ್ರದ ನವಲಗುಂದ ನಗರದ ಕೃಷಿ ಮಾರುಕಟ್ಟೆ ಯಲ್ಲಿ ಹಿಂಗಾರಿ ಬಿತ್ತನೆ ಕಾರ್ಯಕ್ಕೆ ಕಡಲೆ ಬೀಜ ಖರೀದಿ ಕೇಂದ್ರವನ್ನು ಉದ್ಘಾಟನೆ ಮಾಡಿ ಸಾಂಕೇತಿಕವಾಗಿ ರೈತರಿಗೆ ಬೀಜ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸಹಾಯಕ ಕೃಷಿ ನಿರ್ದೇಶಕರು ಶ್ರೀನಾಥ್ ಚಿಮ್ಮಲಗಿ,ಶಿವಕುಮಾರ್ ಬೀರಣ್ಣವರ, ಎಮ್. ಕೆ. ಕಳ್ಳಿ ಮನಿ, ಉಮೇಶ್ ಹೊಸಮನಿ ಹಾಗೂ ಉಮೇಶ್ ನವಲಗುಂದದ ರೈತ ಮುಖಂಡರಾದ ದೇವೇಂದ್ರಪ್ಪ ಹಳ್ಳದ ಹಾಗೂ ರೈತ ಬಾಂಧವರು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ನವಲಗುಂದ,,,,,


Google News

 

 

WhatsApp Group Join Now
Telegram Group Join Now
Suddi Sante Desk