ಬೆಂಗಳೂರು –
ರಾಜ್ಯದಲ್ಲಿ ಶಿಕ್ಷಕರ ವರ್ಗಾವಣೆ ನಡೆಯುತ್ತಿದ್ದರು ಕೂಡಾ ಸಧ್ಯ 50 ಸಾವಿರಕ್ಕೂ ಹೆಚ್ಚು ಶಿಕ್ಷಕರು ಈ ಒಂದು ವರ್ಗಾ ವಣೆಯಿಂದ ವಂಚಿತಗೊಂಡಿದ್ದಾರೆ.ಶಿಕ್ಷಕರ ಹುದ್ದೆ ಶೇ.25 ರಷ್ಟು ಖಾಲಿ ಇರುವ ರಾಜ್ಯದ 53 ತಾಲೂಕುಗಳನ್ನು ವರ್ಗಾವಣೆ ವ್ಯಾಪ್ತಿಯಿಂದ ಹೊರಗಿಟ್ಟ ಪರಿಣಾಮ 50 ಸಾವಿರಕ್ಕೂ ಹೆಚ್ಚು ಶಿಕ್ಷಕರು ಈ ಒಂದು ವರ್ಗಾವಣೆ ಭಾಗ್ಯ ದಿಂದ ವಂಚಿತರಾಗಿದ್ದಾರೆ ಎಂಬ ಅಂಶ ಈಗ ಬೆಳಕಿಗೆ ಬಂದಿದೆ.
ಇನ್ನೂ ಪ್ರಮುಖವಾಗಿ ಈ ಒಂದು ಪತಿ-ಪತ್ನಿ ವರ್ಗಾವಣೆ ಪ್ರಕರಣದಲ್ಲಿ ತಾಲೂಕಿನೊಳಗೆ ನಿಗದಿತ ವಿಷಯ ಖಾಲಿ ಯಲ್ಲ ಎಂಬ ಕಾರಣಕ್ಕೆ ನೂರಾರು ಶಿಕ್ಷಕರಿಗೆ ವರ್ಗಾವಣೆ ಲಾಭ ದೊರೆಯುತ್ತಿಲ್ಲ.ಶಿಕ್ಷಕರಿಗೆ ಅನುಕೂಲವಾಗುವಂತೆ ವರ್ಗಾವಣೆ ಪ್ರಕ್ರಿಯೆ ನಡೆಸಲು ವರ್ಗಾವಣೆ ಕಾಯ್ದೆಯನ್ನು ಎರಡು ಬಾರಿ ರಾಜ್ಯ ಸರ್ಕಾರ ತಿದ್ದುಪಡಿ ಮಾಡಿದ್ದರೂ ಇಂತಹ ನ್ಯೂನತೆಗಳಿಂದಾಗಿ ವರ್ಗಾವಣೆ ಪ್ರಕ್ರಿಯೆ ಗೊಂದಲ ಬಗೆಹರಿಯುತ್ತಿಲ್ಲ.ಪ್ರಸ್ತುತ ನಡೆಯುತ್ತಿರುವ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ವರ್ಗಾ ವಣೆ ಪ್ರಕ್ರಿಯೆಯಲ್ಲಿ ಸಾವಿರಾರು ಶಿಕ್ಷಕರು ತೀವ್ರ ಸಮಸ್ಯೆಗೆ ಸಿಲುಕಿದ್ದಾರೆ.ಇದರ ನಡುವೆ ಮೈಸೂರು ವಿಭಾಗಕ್ಕೆ ತಡೆ ಯಾಜ್ಞೆ ಬಂದಿದ್ದು ಮತ್ತೊಂದು ಸಮಸ್ಯೆಯಾಗಿದೆ ಒಟ್ಟಾರೆ ಯಾರಿಗೂ ಯಾವ ಇಲಾಖೆಗೂ ಇಲ್ಲದ ಈ ಒಂದು ವರ್ಗಾ ವಣೆ ಶಿಕ್ಷಣ ಇಲಾಖೆಯ ಶಿಕ್ಷಕರಿಗೆ ಇದೆ ಇದೊಂದು ದೊಡ್ಡ ಪ್ರಮಾಣದಲ್ಲಿ ಸಮಸ್ಯೆ ಯಾಗಿದ್ದು ಇದರ ನಡುವೆ ಸಿಕ್ಕು ಶಿಕ್ಷಕರು ಸಿಕ್ಕು ಒದ್ದಾಡುತ್ತಿದ್ದಾರೆ.