ಸರ್ಕಾರಿ ಶಾಲಾ ಶಿಕ್ಷಕಿಯ ಕೊಲೆ ಆರು ಬಾಲಕರ ಬಂಧನ – ಜಮೀನು ವ್ಯಾಜ್ಯದಿಂದ ಶಿಕ್ಷಕಿ ದಿವ್ಯಶ್ರೀ ಕೊಲೆ…..ಸುಪಾರಿ ನೀಡಿದ ಆರೋಪಿಗಾಗಿ ಪೊಲೀಸರ ಹುಡುಕಾಟ…..

Suddi Sante Desk
ಸರ್ಕಾರಿ ಶಾಲಾ ಶಿಕ್ಷಕಿಯ ಕೊಲೆ ಆರು ಬಾಲಕರ ಬಂಧನ – ಜಮೀನು ವ್ಯಾಜ್ಯದಿಂದ ಶಿಕ್ಷಕಿ ದಿವ್ಯಶ್ರೀ ಕೊಲೆ…..ಸುಪಾರಿ ನೀಡಿದ ಆರೋಪಿಗಾಗಿ ಪೊಲೀಸರ ಹುಡುಕಾಟ…..

ಕೋಲಾರ

ಸರ್ಕಾರಿ ಶಾಲಾ ಶಿಕ್ಷಕಿಯ ಕೊಲೆ ಆರು ಬಾಲಕರ ಬಂಧನ – ಜಮೀನು ವ್ಯಾಜ್ಯದಿಂದ ಶಿಕ್ಷಕಿ ದಿವ್ಯಶ್ರೀ ಕೊಲೆ…..ಸುಪಾರಿ ನೀಡಿದ ಆರೋಪಿಗಾಗಿ ಪೊಲೀಸರ ಹುಡುಕಾಟ

ಕೋಲಾರದಲ್ಲಿ ನಡೆದಿದ್ದ ಶಿಕ್ಷಕಿಯೊಬ್ಬರ ಕೊಲೆ ಪ್ರಕರಣ ಕುರಿತಂತೆ ಆರು ಜನ ಬಾಲಕರನ್ನು ಬಂಧನ ಮಾಡಲಾಗಿದೆ.ಹೌದು ಆಗಸ್ಟ್ 14 ರಂದು ಮನೆಯಲ್ಲಿ ಟಿವಿ ನೋಡುತ್ತಾ ಕುಳಿತು ಕೊಂಡಿದ್ದ ಸರ್ಕಾರಿ ಶಾಲೆಯ ಶಿಕ್ಷಕಿ ದಿವ್ಯಶ್ರೀ ಎಂಬುವರನ್ನು ಕೊಲೆ ಮಾಡಲಾಗಿತ್ತು

ಈ ಒಂದು ಕುರಿತಂತೆ ಮುಳಬಾಗಿಲು ಪೊಲೀಸರು ದೂರನ್ನು ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಂಡಿದ್ದರು.ಸಧ್ಯ ಪೊಲೀಸರ ಬಲೆಗೆ ಕೊಲೆ ಮಾಡಿದ ಪಾತಕಿಗಳು ಬಲೆಗೆ ಬಿದ್ದಿ ದ್ದಾರೆ.ಶಿಕ್ಷಕಿಯ ಕತ್ತು ಸೀಳಿ ಕೊಲೆ ಮಾಡಿದ ಆರು ಬಾಲಕರನ್ನು ಬಂಧನ ಮಾಡಲಾಗಿದೆ.

ಮುಳಬಾಗಿಲು ನಗರದ ಸುಂಕೂ ಲೇಔಟ್ ನಲ್ಲಿ ಈ ಒಂದು ಕೊಲೆ ನಡೆದಿತ್ತು.ಈ ಪ್ರಕರಣದ ಜಾಡು ಹಿಡಿದ ನಗರ ಪೊಲೀಸರು ವಿಶೇಷ ತಂಡ ರಚಿಸಿ ಆರೋಪಿಗಳಿಗೆ ಬಲೆ ಬಿಸಿದ್ದರು. ಅದರಂ ತೆಯೇ ತಿರುಪತಿಯಲ್ಲಿ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸು ತ್ತಿದ್ದಾರೆ.

ಆರು ಜನ ಹಂತಕರಲ್ಲಿ ಬಹುತೇಕ ಅಪ್ರಾಪ್ತರು ಎಂಬ ಮಾಹಿತಿ ಸಿಕ್ಕಿದೆ.ಸದ್ಯ ವಿಚಾರಣೆ ವೇಳೆ ಜಮೀನು ವ್ಯಾಜ್ಯ, ದ್ವೇಷದಿಂದ ಶಿಕ್ಷಕಿ ದಿವ್ಯಶ್ರಿ ಕೊಲೆಗೆ ಸುಫಾರಿ ನೀಡಲಾಗಿದೆ ಎಂದು ತಿಳಿದು ಬಂದಿದ್ದು ಸುಫಾರಿ ನೀಡಿದ ಪ್ರಮುಖ ಆರೋಪಿ ಗಾಗಿ ಪೊಲೀಸರ ಹುಡುಕಾಟ ನಡೆಸುತ್ತಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಕೋಲಾರ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.