LIVE TV LocalCrimeNationalInternationalPoliticsEducationTechnologyEntertainmentSportsFeature
State News

ಶಿಕ್ಷಕ ಆತ್ಮಹತ್ಯೆ ಪೊಲೀಸರ ಎದುರು ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕ.....

ರಾಮನಗರ -

ಪೋಕ್ಸೊ ಪ್ರಕರಣದ ಆರೋಪ ಎದುರಿಸುತ್ತಿರುವ ದೈಹಿಕ ಶಿಕ್ಷಣ ಶಿಕ್ಷಕರೊಬ್ಬರು ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಂಕೀರ್ಣದ ಮೂರನೇ ಮಹಡಿಯಿಂದ‌ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಚನ್ನಪಟ್ಟಣ ತಾಲ್ಲೂಕಿನ ಅಕ್ಕೂರು ಪೊಲೀಸ್ ಠಾಣೆ ವ್ಯಾಪ್ತಿಯ ಖಾಸಗಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲ್ಲೂಕಿನ ಚಪ್ಪರದಹಳ್ಳಿ ಗ್ರಾಮದ ಎಸ್. ಶಶಿಧರ್ (49) ಮೃತ ಆರೋಪಿ ಯಾಗಿದ್ದಾನೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಮಾತನಾಡಿ  ಶಾಲೆಯ ಕೆಲ ಮಕ್ಕಳ ಮೇಲೆ ಶಶಿಧರ್ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮಕ್ಕಳ ಸಹಾಯವಾಣಿಗೆ ಕರೆ ಬಂದಿತ್ತು

 ಆ ಮೇರೆಗೆ ಜಿಲ್ಲಾ‌ ಮಕ್ಕಳ ರಕ್ಷಾಣಾಧಿಕಾರಿ ನೀಡಿದ ದೂರಿನ ಮೇರೆಗೆ ಆತನ ವಿರುದ್ಧ ರಾಮನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಮೂರು ದಿನಗಳ ಹಿಂದೆ ಪ್ರಕರಣ ದಾಖಲಾಗಿತ್ತು ಎಂದರು.ಪ್ರಕರಣಕ್ಕೆ ಸಂಬಂಧಿಸಿದಂತೆ ಶಶಿಧರ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಜೊತೆಗೆ ಸಂತ್ರಸ್ತ ಮಕ್ಕಳಿಂ ದಲೂ ಹೇಳಿಕೆ ಪಡೆಯಲಾಗಿತ್ತು. ಬಳಿಕ ಆರೋಪಿ ಯನ್ನು ನ್ತಾಯಾಂಗ ಬಂಧನಕ್ಕೆ ಒಪ್ಪಿಸುವುದಕ್ಕಾಗಿ  ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಬೆರಳಚ್ಚು ಪಡೆಯಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಬೆಳಿಗ್ಗೆ ಕರೆ ತರಲಾಗಿತ್ತು ಎಂದರು.

ಮೂರನೇ ಮಹಡಿಯಲ್ಲಿ ಶಶಿಧರ್ ಬೆರಳಚ್ಚು ಪಡೆದು ಕರೆ ತರುವಾಗ ಜೊತೆಗಿದ್ದ ಕಾನ್ಸ್‌ಟೇಬಲ್ ಅವರನ್ನು ತಳ್ಳಿ ಮೇಲಿನಿಂದ ಕೆಳಕ್ಕೆ ಜಿಗಿದಿದ್ದಾನೆ.‌ ತಳಮಹಡಿಯ‌ ಲಿಫ್ಟ್ ಪಕ್ಕ ಬಿದ್ದು ಗಂಭೀರವಾಗಿ ಗಾಯಗೊಂಡ ಅವರನ್ನು ಕೂಡಲೇ ಆತನನ್ನು ಸಮೀಪದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ ಎಂದು ತಿಳಿಸಿದರು

ಸುದ್ದಿ ಸಂತೆ ನ್ಯೂಸ್ ರಾಮನಗರ.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಕ ಆತ್ಮಹತ್ಯೆ ಪೊಲೀಸರ ಎದುರು ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕ.....ಸುಟ್ಟ ಸ್ಥಿತಿಯಲ್ಲಿ ಕಾನ್ಸ್ಟೇಬಲ್ ಶವ ಪತ್ತೆ.....ತನಿಖೆ ಕೈಗೊಂಡ ಪೊಲೀಸರು.....ಶಿಕ್ಷಣ ವಲಯದಲ್ಲಿ ಕಾವು ಹೆಚ್ಚಿಸಿದ 'ನೋಟಿಸ್'.....ಇಲಾಖೆಗೆ ತಂದಿಟ್ಟಿದೆ ದೊಡ್ಡ ಪ್ರಮಾಣದ ತಲೆನೋವು.....ದಸರಾ ವಿಭಾಗ ಮಟ್ಟಕ್ಕೆ ಆಯ್ಕೆಯಾದ ದೇವಸೂಗೂರು ಮಹಿಳಾ ಕಬಡ್ಡಿ ತಂಡ.....ದೇವಸೂಗೂರು ಗ್ರಾಮದ ಕ್ರೀಡಾ ಸ್ಪೂರ್ತಿ ಹೆಚ್ಚಿಸಿದ ಕ್ರೀಡಾ ಪ್ರತಿಭೆಗಳು.....ಶಿಕ್ಷಕರಿಗೆ ಮೂರು ದಿನಗಳ ಗಡುವು.....ದೊಡ್ಡ ಸಂಚಲನ ಸೃಷ್ಟಿಸಿದ ನೊಟೀಸ್‌ ವಿಚಾರ.....16 ಜಿಲ್ಲೆಗಳ DDPI, BEO ವಿರುದ್ಧ ಆರಂಭಗೊಂಡ ತನಿಖೆ.....ಅಧಿಕಾರಿಗಳಲ್ಲಿ ಶುರುವಾಯಿತು ಢವಢವ.....ಸರ್ಕಾರಿ ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ.....ಬೆಳ್ಳಂ ಬೆಳಿಗ್ಗೆ ಸರ್ಕಾರಿ ಅಧಿಕಾರಿ ಮೇಲೆ CM ಗರಂ ಅಮಾನತು ಮಾಡಲು ಸೂಚನೆ.....ಸರ್ಕಾರಿ ಅಧಿಕಾರಿ ವಿರುದ್ಧ CM ಆಕ್ರೋಶ..... ಶೈಕ್ಷಣಿಕ ಪ್ರವಾಸದಲ್ಲಿ ನೋ ಸೆಲ್ಫಿ,ನೋ ರೀಲ್ಸ್‌ ಸಂಪೂರ್ಣವಾಗಿ ಬ್ಯಾನ್.....ಆದೇಶ ಹೊರಡಿಸಿದ ಶಿಕ್ಷಣ ಇಲಾಖೆ..... 71 ಶಾಲೆಗಳ 182 ಜನ ಶಿಕ್ಷಕರಿಗೆ ನೊಟೀಸ್ .....ಶಾಸಕರ ನಡೆಗೆ ಅಸಮಾಧಾನ ಬೇಸರ.....