ಬೆಂಗಳೂರು –
2017 ರ ತಿದ್ದುಪಡಿ ಮಾಡಿರುವ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮದಿಂದ ಸೇವಾನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ ರಿಗೆ ಆಗಿರುವ ಅನ್ಯಾಯ ಆಗಿದ್ದು ಈ ಒಂದು ವಿಚಾರ ಕುರಿತಂತೆ ಕ ರಾ ಪ್ರಾ ಶಾ ಸಂಘವು ನಿಷ್ಠಾ 3.0 ತರಬೇತಿಯಲ್ಲಿ ಲಾಗಿನ್ ಆಗದೇ ತರಬೇತಿ ಯನ್ನು ಬಹಿಷ್ಕರಿಸುವುದಾಗಿ ಹೇಳಿದ್ದಾರೆ.ಈ ಒಂದು ವಿಚಾರ ಕುರಿತು ನಾಡಿನ ಶಿಕ್ಷಕರು ಅಸಮಾಧಾನ ಗೊಂಡಿದ್ದಾರೆ.ತರಬೇತಿ ಬಹಿಷ್ಕಾರ ಬದಲಿಗೆ ತರಗತಿಯ ಬಹಿಷ್ಕಾರಕ್ಕೆ ಕರೆ ನೀಡವಂತೆ ನಾಡಿನ ಶಿಕ್ಷಕರು ಕರೆ ನೀಡಿದ್ದಾರೆ.
ಹೌದು ಅತ್ತ ಈ ಒಂದು ಕುರಿತು ಸಂದೇಶ ಹೊರ ಬೀಳುತ್ತಿದ್ದಂತೆ ಇತ್ತ ನಾಡಿನ ಶಿಕ್ಷಕರು ಸಿಡಿದೆದ್ದಿ ದ್ದಾರೆ.ಇಂತಹ ಕಣ್ಣೊರೆಸುವ ತಂತ್ರವನ್ನು ಬಿಟ್ಟು ತರಬೇತಿ ಬಹಿಷ್ಕಾರ ಬೇಡ ತರಗತಿ ಬಹಿಷ್ಕಾರ ವಾಗಲಿ ಎಂದಿದ್ದಾರೆ.ಅಲ್ಲದೇ ಈ ಒಂದು ವಿಚಾರ ಕುರಿತು ರಾಜ್ಯದಲ್ಲಿ ಆರಂಭಗೊಂಡಿದೆ ಸ್ವಾಭಿಮಾನಿ ಪ್ರಾಥಮಿಕ ಶಾಲಾ ಶಿಕ್ಷಕರಿಂದ ಹೊಸದೊಂದು ಅಭಿಯಾನ.ಇನ್ನಾದರೂ ಶಿಕ್ಷಕರ ಸಂಘಟನೆಯ ನಾಯಕರು ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ರೀತಿಯಲ್ಲಿ ನೊಂದುಕೊಂಡಿರುವ ನಾಡಿನ ಶಿಕ್ಷಕರಿಗೆ ನ್ಯಾಯ ಒದಗಿಸೊದು ಅವಶ್ಯಕವಿದೆ