ಬೆಂಗಳೂರು –
ಕೋವಿಡ್ ಕಾರಣದಿಂದಾಗಿ ಶಾಲೆಗಳಲ್ಲಿ ನಿಲ್ಲಿಸಲಾಗಿದ್ದ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಮತ್ತೆ ಆರಂಭ ಮಾಡಲು ಇಲಾಖೆ ಆದೇಶವನ್ನು ಮಾಡಿದೆ. ಹೌದು ಅಕ್ಟೋಬರ್ 21 ರಿಂದ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಯಲ್ಲಿ ಆರಂಭ ಮಾಡುವಂತೆ ಆದೇಶ ವನ್ನು ಮಾಡಲಾಗಿದೆ
ಹೌದು ಸಧ್ಯ ದಸರಾ ರಜೆ ಇದೆ ಹೀಗಾಗಿ ರಜೆ ಮುಗಿದ ಕೂಡಲೇ ಅಕ್ಟೋಬರ್ 21 ರಿಂದ ಶಾಲೆಗಳಲ್ಲಿ ಬಿಸಿಯೂಟ ಆರಂಭ ಮಾಡಲು ಆದೇಶವನ್ನು ಮಾಡಲಾಗಿದೆ
ಈ ಕುರಿತು ಇಲಾಖೆಯ ನಿರ್ದೇಶಕರು ಆದೇಶವನ್ನು ಮಾಡಿದ್ದು ಅಕ್ಟೋಬರ್ 21 ರಿಂದ ಕೋವಿಡ್ ನಡುವೆ ಯೂ ಕೂಡಾ ಕೆಲವೊಂದಿಷ್ಟು ನಿಯಮಗಳನ್ನು ಪಾಲಿಸಿ ಈ ಒಂದು ಬಿಸಿಯೂಟ ಆರಂಭ ಮಾಡುವಂತೆ ಸೂಚನೆ ನೀಡಿದ್ದಾರೆ.